ಕುಕ್ಕೆ ಸುಬ್ರಹ್ಮಣ್ಯ: ರಸ್ತೆ ಬದಿ ಹುಲ್ಲು ಕಟ್ಟಿಂಗ್‌ ಮಷಿನ್‌ ಹಿಡಿದುಕೊಂಡು ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

ಕುಕ್ಕೆ ಸುಬ್ರಹ್ಮಣ್ಯ: ರಸ್ತೆ ಬದಿ ಹುಲ್ಲು ಕಟ್ಟಿಂಗ್‌ ಮಷಿನ್‌ ಹಿಡಿದುಕೊಂಡು ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

Kadaba Times News

ಕಡಬ ಟೈಮ್, ಸುಬ್ರಹ್ಮಣ್ಯ:  ಹುಲ್ಲು ಕಟ್ಟಿಂಗ್ಮಷಿನ್ಹಿಡಿದುಕೊಂಡು ನಿಂತಿದ್ದ ವ್ಯಕ್ತಿಯೊಬ್ಬರಿಗೆ  ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ  ಉಪ್ಪಿನಂಗಡಿ – ಸುಬ್ರಹ್ಮಣ್ಯರಾಜ್ಯ  ಹೆದ್ದಾರಿ ಬದಿಯ  ಕುಲ್ಕುಂದದಲ್ಲಿ ನಡೆದಿದೆ.



ನಾರಾಯಣ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು. ಜ.5 ರಂದು ಕುಲ್ಕುಂದದ ವಿಶ್ವನಾಥ ರಾವ್ಎಂಬವರ  ಜಾಗದ ಹುಲ್ಲನ್ನು ಕಟ್ಟಿಂಗ್ಮಾಡುವ ಸಲುವಾಗಿ ಬಂದು ಕೆಲಸವಾದ ಬಳಿಕ  ನೀಲಪ್ಪ ಗೌಡ ಎಂಬವರ ಜೊತೆ್  ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಎಂಬಲ್ಲಿ  ಡಾಮಾರು ರಸ್ತೆಯ  ಬದಿ  ಮಣ್ಣು ರಸ್ತೆಯಲ್ಲಿ ನಿಂತಿದ್ದರು.


ಈ ಸಂದರ್ಭದಲ್ಲಿ  ಕೈಕಂಬ ಕಡೆಯಿಂದ ಸುಬ್ರಹ್ಮಣ್ಯ ಕಡೆಗೆ ಬರುತ್ತಿದ್ದ ಒಂದು ಕಾರನ್ನು ಚಾಲಕನು ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಸ್ತೆಯ ತೀರಾ ಎಡಬದಿಯಲ್ಲಿ ಕಟ್ಟಿಂಗ್ಮಷಿನ್ಹಿಡುದುಕೊಂಡಿದ್ದ ನಾರಾಯಣ ಎಂಬವರಿಗೆ ಡಿಕ್ಕಿ ಹೊಡೆತ್ತು.


ಇದರ ಪರಿಣಾಮ ಮಿಷನ್ಸಮೇತ ಸುಮಾರು 10 ಅಡಿ ದೂರ ಎಸೆಯಲ್ಪಟ್ಟು ಅವರ ತಲೆಯ ಎಡಭಾಗ, ಸೊಂಟದ ಎಡಬಾಗ ರಕ್ತಗಾಯವಾಗಿ ಕಿವಿಯಲ್ಲಿ ರಕ್ತ ಸೋರುತ್ತಿದ್ದು, ಅಲ್ಲದೆ ಕಾಲು ಹಾಗೂ ಕೈಗಳಿಗೆ ಗುದ್ದಿದ ಗಾಯವಾಗಿತ್ತು. ಕೂಡಲೇ  108 ಅಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಲಾಗಿದೆ.


ನಾರಾಯಣ ಗೌಡರವರು ಹಿಡಿದುಕೊಂಡಿದ್ದ ಕಟ್ಟಿಂಗ್ಮಿಷನ್ತಾಗಿ ನೀಲಪ್ಪ ಗೌಡ ಎಂಬವರಿಗೂ ತಾಗಿ ಮೈಕೈಗೆ ಗುದ್ದಿದ ಗಾಯವಾಗಿದೆ.   ಬಗ್ಗೆ ಸುಬ್ರಹ್ಮಣ್ಯ ಠಾಣೆ .ಕ್ರ ನಂಬ್ರ:02/2025  ಕಲಂ:125(a), 281 BNS-2023 ಯಂತೆ ಪ್ರಕರಣ ದಾಖಲಾಗಿದೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top