




ಕಡಬ ಟೈಮ್, ಆಲಂಕಾರು: ಕಡಬ ಠಾಣೆ ವ್ಯಾಪ್ತಿಯ ಕ್ಯೂಲ ಗ್ರಾಮದ ಪರಂಗಾಜೆ ಎಂಬಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ಕಡಬ ಪೊಲೀಸರು ತಡೆದು ಅದರಲ್ಲಿದ್ದ ಗೋವುಗಳನ್ನು ರಕ್ಷಿಸಿದ್ದಾರೆ.
![]() |
ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿರುವುದು ಮತ್ತು ವಶಕೆ ಪಡೆದ ವಾಹನ |
ಆಲಂಕಾರಿನಲ್ಲಿ ಗತ್ತಿನಲ್ಲಿದ್ದ ವೇಳೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ವಾಹನದಲ್ಲಿ ಅಮಾನವೀಯವಾಗಿ ಸಾಗಿಸುತ್ತಿದ್ದ ಎಂಟು ಗೋವುಗಳನ್ನು ಪತ್ತೆ ಹಚ್ಚಿದ್ದಾರೆ. ದಾಳಿಯ ಸಂದರ್ಭ ಪೊಲೀಸರ ವಾಹನ ಕಂಡು ಪಿಕಪ್ ವಾಹನವನ್ನು ಅಲ್ಲೇ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ.
ವಾಹನವನ್ನು ಪರಿಶೀಲಿಸಿ ದಾಗ ಜಾನುವಾರುಗಳ ಕಾಲುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿರುವುದು ಕಂಡು ಬಂದಿದೆ.ಪಿಕ್ ಅಪ್ ವಾಹನದಲ್ಲಿ ಗೋವುಗಳ ಕೈಕಾಲು ಕಟ್ಟಿ ತುಂಬಿಸಿ ಮೇಲೆ ಗೋವುಗಳ ಪತ್ತೆಯಾಗ ಬಾರದೆಂದು ಅದರ ಮೇಲೆ ಹಲಗೆಯನ್ನಿಟ್ಟು,ಮೇಲ್ಬಾಗದಲ್ಲಿ ತರಕಾರಿ ತುಂಬುವ ಕ್ರೇಟ್ ಗಳನ್ನು ಇಡಲಾಗಿತ್ತು. ಠಾಣೆಗೆ ಕರೆದೊಯ್ಯುವ ವೇಳೆ ಆದಾಗಲೇ ಮೂರು ಗೋವುಗಳು ಸಾವಿಗೀಡಾಗಿದ್ದವು. ಯಾವುದೇ ಪರವಾನಗಿ ಇಲ್ಲದೇ ಮಾಂಸ, ಮಾಡುವ ಅಥವಾ ಇತರೆ ಉದ್ದೇಶಕ್ಕಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಬೆಳ್ಳಂಬೆಳಗ್ಗೆ ದಾಳಿ ಮಾಹಿತಿ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕಡಬ ಠಾಣಾ ಎಸ್.ಐ ಅಭಿನಂದನ್ ನೇತೃತ್ವದಲ್ಲಿ ಹೆಡ್ ಕಾನ್ಸ್ಟೆಬಲ್ ಹರೀಶ್, ಸಿಬ್ಬಂದಿಯವರಾದ ವಿಠಲ ಜೋಗಣ್ಣನವರ್. ಪ್ರವೀಣ ಶಿಂಗಣ್ಣನವರ್ ಮತ್ತಿತರರು ಪಾಲ್ಗೊಂಡಿದರು.
ವಾಹನದಲ್ಲಿ ಮೂರು ಮಂದಿ:ಶಂಕೆ: ಸ್ಥಳೀಯರ ಪ್ರಕಾರ ವಾಹನದಲ್ಲಿ ಚಾಲಕ ಸಹಿತ ಮೂರು ಬಂದಿ ಇದ್ದಾರೆಂದು ಹೇಳಲಾಗುತ್ತಿದ್ದು ಅಧಿಕೃತಗೊಂಡಿಲ್ಲ. ತಪ್ಪಿಸಿಕೊಂಡು ಹೋದವರಿಗೆ ಸ್ಥಳೀಯರು ಆಸರೆ ನೀಡಿದ್ದಾರೆಯೇ ಎಂಬ ಅನುಮಾನವೂ ಜನರನ್ನು ಕಾಡತೊಡಗಿದೆ.ಅಲ್ಲದೆ ದನಗಳ ಕಿವಿಯಲ್ಲಿ ದಾಖಲೆಯ ಹಳದಿ ಬಣ್ಣದ ಟ್ಯಾಗ್ ಇದ್ದು ಅವುಗಳ ಮೂಲ ಪತ್ತೆ ಹಚ್ಚಿದರೆ ನಿಖರ ಮಾಹಿತಿ ತಿಳಿಯಲಿದೆ ಎನ್ನುತ್ತಾರೆ ಹಿಂದೂಪರ ಸಂಘಟನೆಯ ಮುಖಂಡರು.