ಕಡಬ:ದೇರಾಜೆ ಕಾಡಿನಲ್ಲಿ ಆಟೋ ಚಾಲಕನಿಗೆ ಎದುರುಗೊಂಡ ಚಿರತೆ

ಕಡಬ:ದೇರಾಜೆ ಕಾಡಿನಲ್ಲಿ ಆಟೋ ಚಾಲಕನಿಗೆ ಎದುರುಗೊಂಡ ಚಿರತೆ

Kadaba Times News

 ಕಡಬ ಟೈಮ್ಸ್  ಕುಟ್ರುಪ್ಪಾಡಿ:  ಪಂಜ ವಲಯ ಅರಣ್ಯ ವ್ಯಾಪ್ತಿಯ ಕುಟ್ರುಪ್ಪಾಡಿ ಗ್ರಾಮದ ದೇರಾಜೆ ಸಮೀಪದ ರಕ್ಷಿತಾರಣ್ಯದ  ಬಳಿ ಚಿರತೆಯೊಂದು ಓಡಾಡಿದ ಘಟನೆ ಜ.14 ರ ಮಧ್ಯಾಹ್ನ ನಡೆದಿದೆ. 



ಪಟುಬೆಟ್ಟುವಿನ ಮಹಾಬಲ ಎಂಬವರು ತನ್ನ   ವಾಹನದಲ್ಲಿ ದೇರಾಜೆ- ಇಚಿಲಂಪಾಡಿಯ ಮೂಲಕ ತೆರಳುತ್ತಿದ್ದ ಸಂದರ್ಭದಲ್ಲಿ   ಕೊಕ್ಕದ ಕಾಡು ಎಂಬಲ್ಲಿ  ಚಿರತೆಯು  ಏಕಾಏಕಿ   ರಸ್ತೆ ದಾಟಿದೆ. ಕೂಡಲೇ ತನ್ನ ಆಟೋ ವನ್ನು ನಿಲ್ಲಿದ್ದು  50ಮೀಟರ್ ದೂರದ ವರೆಗೂ ಕಾಡಂಚಿನ ಪ್ರದೇಶದತ್ತ ಹೋಗುತ್ತಿರುವುದನ್ನು ಗಮನಿಸಿರುವುದಾಗಿ ಮಾಹಿತಿ ನೀಡಿದ್ದಾರೆ. 


ಈ ಪ್ರದೇಶದ ಜನರು ತಮ್ಮ  ಸಾಕು ನಾಯಿ, ದನ ಕರುಗಳ ಬಗ್ಗೆ ನಿಗವಹಿಸುವುದು ಅಗತ್ಯವಾಗಿದೆ.ಈ ಬಗ್ಗೆ ಅರಣ್ಯ ಇಲಾಖೆಯವರನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಯತ್ನಿಸಿದರೂ ಸಕಾಲಕ್ಕೆ ಪೋನ್ ಸಂಪರ್ಕಕ್ಕೆ ಸಿಗಲಿಲ್ಲ.



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top