




ಕಡಬ ಟೈಮ್ಸ್ ಕುಟ್ರುಪ್ಪಾಡಿ: ಪಂಜ ವಲಯ ಅರಣ್ಯ ವ್ಯಾಪ್ತಿಯ ಕುಟ್ರುಪ್ಪಾಡಿ ಗ್ರಾಮದ ದೇರಾಜೆ ಸಮೀಪದ ರಕ್ಷಿತಾರಣ್ಯದ ಬಳಿ ಚಿರತೆಯೊಂದು ಓಡಾಡಿದ ಘಟನೆ ಜ.14 ರ ಮಧ್ಯಾಹ್ನ ನಡೆದಿದೆ.
ಪಟುಬೆಟ್ಟುವಿನ ಮಹಾಬಲ ಎಂಬವರು ತನ್ನ ವಾಹನದಲ್ಲಿ ದೇರಾಜೆ- ಇಚಿಲಂಪಾಡಿಯ ಮೂಲಕ ತೆರಳುತ್ತಿದ್ದ ಸಂದರ್ಭದಲ್ಲಿ ಕೊಕ್ಕದ ಕಾಡು ಎಂಬಲ್ಲಿ ಚಿರತೆಯು ಏಕಾಏಕಿ ರಸ್ತೆ ದಾಟಿದೆ. ಕೂಡಲೇ ತನ್ನ ಆಟೋ ವನ್ನು ನಿಲ್ಲಿದ್ದು 50ಮೀಟರ್ ದೂರದ ವರೆಗೂ ಕಾಡಂಚಿನ ಪ್ರದೇಶದತ್ತ ಹೋಗುತ್ತಿರುವುದನ್ನು ಗಮನಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಈ ಪ್ರದೇಶದ ಜನರು ತಮ್ಮ ಸಾಕು ನಾಯಿ, ದನ ಕರುಗಳ ಬಗ್ಗೆ ನಿಗವಹಿಸುವುದು ಅಗತ್ಯವಾಗಿದೆ.ಈ ಬಗ್ಗೆ ಅರಣ್ಯ ಇಲಾಖೆಯವರನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಯತ್ನಿಸಿದರೂ ಸಕಾಲಕ್ಕೆ ಪೋನ್ ಸಂಪರ್ಕಕ್ಕೆ ಸಿಗಲಿಲ್ಲ.