ಕಡಬ: ನೆಲ್ಯಾಡಿಯ ಉದ್ಯಮಿಯನ್ನು ಅಪಹರಿಸಿ ಲಕ್ಷಾಂತರ ರೂಪಾಯಿ ಲೂಟಿಗೈದ ದುಷ್ಕರ್ಮಿಗಳ ತಂಡ

ಕಡಬ: ನೆಲ್ಯಾಡಿಯ ಉದ್ಯಮಿಯನ್ನು ಅಪಹರಿಸಿ ಲಕ್ಷಾಂತರ ರೂಪಾಯಿ ಲೂಟಿಗೈದ ದುಷ್ಕರ್ಮಿಗಳ ತಂಡ

Kadaba Times News

ಕರೀಂ ಅವರಿಂದ 1.23 ಲಕ್ಷ ರೂ.ಪಡೆದುಕೊಂಡು ರಾತ್ರಿ 10ಕ್ಕೆ ಬೆಂಗಳೂರಿನಿಂದ ಮಂಗಳೂರು ಮಾರ್ಗವಾಗಿ ಕಾರಿನಲ್ಲಿ ಬರುತ್ತಿದ್ದ ವೇಳೆ ಮಾರ್ಗಮಧ್ಯೆ ದುಷ್ಕರ್ಮಿಗಳ ತಂಡವೊಂದು ಇಕ್ಬಾಲ್ ಅವರ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಅದೇ ಕಾರಿನಲ್ಲಿ ಅಪಹರಣ ಮಾಡಿದ್ದಾರೆ.

 

ಕಡಬ/ನೆಲ್ಯಾಡಿ :  ಟ್ರಾನ್ಸ್ಪೋರ್ಟ್ ಉದ್ಯಮಿಯಾಗಿಯೊಬ್ಬರನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಚಿತ್ರಹಿಂಸೆ ನೀಡಿ  15ಲಕ್ಷ ರೂ.ದೋಚಿ ಸಕಲೇಶಪುರ ರೆಸಾರ್ಟ್ನಲ್ಲಿ ಬಿಟ್ಟುಹೋಗಿರುವ ಘಟನೆ 5 ದಿನದ ಹಿಂದೆ ನಡೆದ ಬಗ್ಗೆ ವರದಿಯಾಗಿದೆ.

AI PHOTO(KADABA TIMES)


ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕೋಲ್ಪೆ ನಿವಾಸಿ ಇಕ್ಬಾಲ್  ಎಂಬವರು ಅಪಹರಣಕ್ಕೆ ಒಳಗಾದವರು.  ಈ ಬಗ್ಗೆ ಇಕ್ಬಾಲ್ ಅವರು ನೀಡಿದ ದೂರಿನಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಉಪ್ಪಿನಂಗಡಿ ಮಠದಲ್ಲಿ ಕಚೇರಿ ಹೊಂದಿರುವ ಅಶೋಕ್ ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಮಾಲಕ  ಇಕ್ಬಾಲ್ ಅವರು  ಜ.24ರಂದು ಸ್ನೇಹಿತ ಕರೀಂ ಅವರ ಬೆಂಗಳೂರಿನ ಮನೆಯಲ್ಲಿ ಉಳಿದುಕೊಂಡಿದ್ದರು. ಜ.25ರಂದು ಬೆಳಿಗ್ಗೆ ಕರೀಂ ಅವರಿಂದ 1.23 ಲಕ್ಷ ರೂ.ಪಡೆದುಕೊಂಡು ರಾತ್ರಿ 10ಕ್ಕೆ ಬೆಂಗಳೂರಿನಿಂದ ಮಂಗಳೂರು ಮಾರ್ಗವಾಗಿ ಕಾರಿನಲ್ಲಿ ಬರುತ್ತಿದ್ದ ವೇಳೆ ಮಾರ್ಗಮಧ್ಯೆ ದುಷ್ಕರ್ಮಿಗಳ ತಂಡವೊಂದು ಇಕ್ಬಾಲ್ ಅವರ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಅದೇ ಕಾರಿನಲ್ಲಿ ಅಪಹರಣ ಮಾಡಿದ್ದಾರೆ. ಬಳಿಕ ಇಕ್ಬಾಲ್ ಅವರ ಬ್ಯಾಂಕ್ ಖಾತೆಯಿಂದ ಮೊಬೈಲ್ ಮೂಲಕ ಪ್ರತಿದಿನ 5 ಲಕ್ಷ ರೂಪಾಯಿಯಂತೆ ಒಟ್ಟು 15ಲಕ್ಷ ರೂ.ವರ್ಗಾವಣೆ ಮಾಡಿಕೊಂಡಿದ್ದಾರೆ.


ಜ.26ರಂದು ಸಕಲೇಶಪುರದಲ್ಲಿದ್ದ ಇಕ್ಬಾಲ್ ಅವರ ಸಹೋದರನ ರೆಸಾರ್ಟ್‌ಗೆ ತೆರಳಿ ಸಹೋದರನನ್ನೂ ಕೊಲೆ ಮಾಡುವುದಾಗಿ ಬೆದರಿಸಿ ಅವರಿಂದಲೂ 13 ಲಕ್ಷ ರೂ. ಪಡೆದುಕೊಂಡು ಕಾರು ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದಾರೆ ಎಂದು ಇಕ್ಬಾಲ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.


ಉಡುಪಿ ಗರಡು ಗ್ಯಾಂಗ್ ಕೃತ್ಯ ಶಂಕೆ : ಅಪಹರಿಸಿದವರು ಉಡುಪಿಯ ಗರುಡ ಗ್ಯಾಂಗ್ ಎಂದು ಹೇಳಿಕೊಂಡು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಎರಡು ದಿನಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ ಎಂದು ಇಕ್ಬಾಲ್ ಅವರು ನೆಲಮಂಗಲ ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top