




ಕಡಬ ಟೈಮ್, ಬೆಳ್ಳಾರೆ: ಧರಿಸಿದ ಶರ್ಟ್ ಬಳಸಿಕೊಂಡು ಯುವಕನೊಬ್ಬ ಗೇರು ಮರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆ ಠಾಣೆ ವ್ಯಾಪ್ತಿಯ ಮುರುಳ್ಯ ಗ್ರಾಮದಿಂದ ವರದಿಯಾಗಿದೆ.
ಮುರುಳ್ಯ ಗ್ರಾಮದ ಕಾಪುತ್ತಡ್ಕ ಎಂಬಲ್ಲಿ ಕಳೆದ ಆರು ತಿಂಗಳಿನಿಂದ ವಾಸವಿದ್ದ ಪ್ರಶಾಂತ್ (20ವ) ಆತ್ಮಹತ್ಯೆ ಮಾಡಿಕೊಂಡ ಯುವಕ.
ತನ್ನ ಚಿಕ್ಕಪನ ಮನೆಯಲ್ಲಿ ಕಳೆದ 6 ತಿಂಗಳಿನಿಂದ ವಾಸವಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದನು. ಇತ್ತೀಚೆಗೆ ಯಾವುದೋ ಮಾನಸಿಕವಾಗಿ ಖಿನ್ನತೆ ಒಳಗಾಗಿದ್ದವನು ಒಬ್ಬಂಟಿಯಾಗಿ ಕುಳಿತಿಕೊಂಡು ಇದ್ದು, ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ ಎನ್ನಲಾಗಿದೆ.
ಜ.6ರಂದು ಮನೆಯಿಂದ ಹೊರಗಡೆ ಎಲ್ಲಿಗೋ ಹೋದವನು ವಾಪಾಸು ಮನೆಗೆ ಬಾರದೇ ಇದ್ದ ವೇಳೆ ಹುಡುಕಾಡಿದಾಗ ಸರಕಾರಿ ಗೇರು ಮರದ ಹಾಡಿಯಲ್ಲಿ ಗೇರು ಮರವೊಂದಕ್ಕೆ ಧರಿಸಿರುವ ಶರ್ಟ್ ನ ಸಹಾಯದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಯಾವುದೋ ವಿಚಾರಕ್ಕೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಗೇರು ಮರವೊಂದಕ್ಕೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ವೇಣುಗೋಪಾಲ ಎಂಬವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆ. UDR No 01/25 ಕಲಂ : ಕಲಂ 194 B N S S. ಯಂತೆ ಪ್ರಕರಣ ದಾಖಲಾಗಿದೆ.