




ಕಡಬ ಟೈಮ್, ಕುಕ್ಕೆ ಸುಬ್ರಹ್ಮಣ್ಯ: ರಸ್ತೆ ಜಮೀನಿನ ದಾಖಲಾತಿ ವಿಚಾರವಾಗಿ ವ್ಯಕ್ತಿಯೊಬ್ಬರು ಬಸ್ ನಿಲ್ದಾಣವೊಂದರ ಬಳಿ ಕೋವಿ ತೋರಿಸಿ ಜೀವ ಬೆದರಿಕೆ ಹಾಕಿದ ವಿಚಾರವಾಗಿ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಿಲದ ಗುತ್ತಿಗಾರು ತುಪ್ಪದ ಮನೆ ನಿವಾಸಿ
, ಮಂಗಳೂರಿನಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿರುವ ಪ್ರಜ್ವಲ್ ಟಿ ಆರ್ ದೂರು ನೀಡಿದವರು.
ಡಿ.30 ರಂದು ರಾತ್ರಿ ನೆರೆ ಮನೆಯ ಜಯರಾಮ ಎಂಬವರು ಕರೆ ಮಾಡಿ ತುಪ್ಪದ ಮನೆ ಬೈಲ್ ಗೆ ಹೋಗುವ ರಸ್ತೆಯ ವಿಷಯದಲ್ಲಿ ದಾಖಲಾತಿಗಳನ್ನು ನಿಮ್ಮ ತಂದೆ ನನಗೆ ನೀಡುತ್ತಿಲ್ಲ ಎಂದು ಅವಾಚ್ಯ ವಾಗಿ ಬೈದುದಿದ್ದರು ಎಂದು ಆರೋಪಿಸಲಾಗಿದೆ. ಹೀಗಾಗಿ ಡಿ.31ರಂದು ಮಂಗಳೂರಿನಿಂದ ಕಮಿಲ ಪುಚ್ಚಪ್ಪಾಡಿ ಬಸ್ ನಿಲ್ದಾಣಕ್ಕೆ ಬಂದಾಗ ಆರೋಪಿಯು “ ನಿನ್ನ ಅಪ್ಪ ನನಗೆ ರಸ್ತೆಯ ಜಮೀನಿನ ದಾಖಲಾತಿಗಳನ್ನು ಕೊಡುವುದಿಲ್ಲ ಎಂದು ನಿಮ್ಮನ್ನೆಲ್ಲ ನೋಡಿಕೊಳ್ಳುತ್ತೇನೆ ಎಂದು ಹೇಳಿ ಅವಾಚ್ಯವಾಗಿ ಬೈದು ಕೋವಿಯನ್ನು ತೋರಿಸಿದಾಗ, ಆತನನ್ನು ಕೋವಿ ಸಮೇತ ನೆಲಕ್ಕೆ ದೂಡಿ ಹಾಕಿ ಬಳಿಕ ಮನೆಗೆ ಹೋಗಿ ತಂದೆಯವರಿಗೆ ಅಲ್ಲಿ ನಡೆದ ವಿಷಯದ ಬಗ್ಗೆ ತಿಳಿಸಿರುವುದುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನೆರೆಕರೆಯ ಜಯರಾಮ ಎಂವರಿಗೆ ರಸ್ತೆ ವಿಷಯದಲ್ಲಿ ಸುಮಾರು 06 ತಿಂಗಳಿಂದ ಸುಳ್ಯ ನ್ಯಾಯಾಲಯದಲ್ಲಿ
ಕೇಸು ಇದ್ದು ಅದಾಲತ್ ನಲ್ಲಿ ಮುಗಿದಿರುತ್ತದೆ. ಆದರೂ
ವಿನ: ಕಾರಣ ಜಮೀನು ದಾಖಲಾತಿ ವಿಷಯದಲ್ಲಿ ಅವಾಚ್ಯವಾಗಿ
ಬೈದು ಕೋವಿಯನ್ನು ತೋರಿಸಿ ಕೊಲ್ಲುತ್ತೇನೆಂದು ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು ನೀಡಿದ್ದು ಈ ಬಗ್ಗೆ
ಸುಬ್ರಹ್ಮಣ್ಯ ಠಾಣೆ ಅ.ಕ್ರ ನಂಬ್ರ 61/2024
ಕಲಂ: 352,351(3) BNS & ಕಲಂ:25(1),27 ಶಸ್ತ್ರಗಳ ಅಧಿನಿಯಮ 1959 ಯಂತೆ ಪ್ರಕರಣ ದಾಖಲಾಗಿರುತ್ತದೆ.