


![]() |
ಸುಬ್ರಹ್ಮಣ್ಯದಲ್ಲಿ ಕರೆಂಟು ಕಂಬದಲ್ಲಿರುವ ಜಾಹೀರಾತು ಫಲಕ |
ಕಡಬ
ಟೈಮ್ಸ್, ಸುಬ್ರಹ್ಮಣ್ಯ:ವಿದ್ಯುತ್
ಕಂಬಗಳಲ್ಲಿ ಜಾಹೀರಾತು ಬರೆಯುವುದು, ಪೋಸ್ಟರ್ ಅಂಟಿಸುವುದು, ಫಲಕ ಅಳವಡಿಸುವುದು ಕಾನೂನು ಬಾಹಿರ.
ಆದರೆ ಸುಬ್ರಹ್ಮಣ್ಯದ ಮುಖ್ಯ ರಸ್ತೆಯ ಬಿಲದ್ವಾರ ಬಳಿ ವಿದ್ಯುತ್ ಕಂಬದಲ್ಲಿ ಜಾಹೀರಾತು
ಫಲಕ ಪ್ರತ್ಯಕ್ಷಗೊಂಡಿದೆ.
ಮಂಗಳೂರು ಕಂಬಳ ಕುರಿತಾಗಿ ಬ್ಯಾನರ್ ಅಳವಡಿಸಲಾಗಿದೆ.
ನಿರ್ದಿಷ್ಟ ಸ್ಥಳದಲ್ಲಿ ಜಾಹೀರಾತು ಹಾಕಲು ಗ್ರಾ.ಪಂ
ಅಧಿಕಾರಿಗಳು ಅನುಮತಿ ನೀಡುತ್ತಾರೆ . ಗ್ರಾ.ಪಂ ವತಿಯಿಂದ
ಅನುಮತಿ ಪಡೆದರೂ ವಿದ್ಯುತ್ ಕಂಬಕ್ಕೆ ಜಾಹೀರಾತು ಫಲಕ ಹಾಕುವಂತಿಲ್ಲ.
ವಿದ್ಯುತ್ ಕಂಬಗಳಲ್ಲಿ ಜಾಹೀರಾತು ಕಂಡು
ಬಂದರೆ ಸಾರ್ವಜನಿಕ ಸೊತ್ತು ನಾಶಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಅಧಿಕಾರಿಗಳಿಗೆ ಅವಕಾಶವಿದೆ.
ಈ ಬಗ್ಗೆ ಕಡಬ ಟೈಮ್ ಗೆ ಪ್ರತಿಕ್ರಿಯಿಸಿರುವ
ಸುಬ್ರಹ್ಮಣ್ಯ ಮೆಸ್ಕಾಂ ಉಪ ವಿಭಾಗದ ಎಇಇ ಸತೀಶ್ ಅವರು ಮೆಸ್ಕಾಂ
ಇಲಾಖೆಯಿಂದ ವಿದ್ಯುತ್ ಕಂಬಗಳಿಗೆ ಯಾವುದೇ ಫಲಕ ಹಾಕಲು ಅನುಮತಿ ಇರುವುದಿಲ್ಲ. ಈ ಬಗ್ಗೆ ಗಮನ ಹರಿಸಲಾಗುವುದು
ಎಂದಿದ್ದಾರೆ.