ಬಿಳಿನೆಲೆ ಗ್ರಾ.ಪಂ ಮುಂಭಾಗ ಶವವಿಟ್ಟು ಗ್ರಾಮಸ್ಥರಿಂದ ಪ್ರತಿಭಟನೆ

ಬಿಳಿನೆಲೆ ಗ್ರಾ.ಪಂ ಮುಂಭಾಗ ಶವವಿಟ್ಟು ಗ್ರಾಮಸ್ಥರಿಂದ ಪ್ರತಿಭಟನೆ

Kadaba Times News

 

ಬಿಳಿನೆಲೆ ಗ್ರಾ.ಪಂ ಎದುರು ಗ್ರಾಮಸ್ಥರ ಪ್ರತಿಭಟನೆ(KADABA TIMES)

ಕಡಬ: ಬಿಳಿನೆಲೆಯ ಸಂದೀಪ್ಕೊಲೆ ಕೇಸ್ನಲ್ಲಿ ಓರ್ವ ಆರೋಪಿಯನ್ನು ಮಾತ್ರ ಬಂಧಿಸಿದ್ದು, ಉಳಿದವರನ್ನು ರಕ್ಷಿಸಲಾಗುತ್ತಿದೆ ಹಾಗೂ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಪೊಲೀಸರು ಹತ್ಯೆಯ ಸಮರ್ಪಕ ತನಿಖೆ ನಡೆಸುತ್ತಿಲ್ಲ  ಎಂದು ಆರೋಪಿಸಿ ಪ್ರಕರಣದ  ಸಮಗ್ರ ತನಿಖೆಗೆ ಒತ್ತಾಯಿಸಿ  ಮೃತರ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಡಿ 3 ರಂದು ಬಿಳಿನೆಲೆ ಗ್ರಾ. ಪಂ ಮುಂಭಾಗ ಮಂಗಳವಾರ  ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.


ಆರಂಭದಲ್ಲಿ ಸಂದೀಪ್ಮನೆಯವರು ನಾಪತ್ತೆ ದೂರು ದಾಖಲಿಸಲು ಬಂದಾಗ ಅದನ್ನು ಸ್ವೀಕರಿಸದೆ ಅವರನ್ನು ಠಾಣೆಯಿಂದ ಓಡಿಸಲಾಯಿತು. ಕುಟುಂಬಸ್ಥರ ಹಾಗೂ ಗ್ರಾಮಸ್ಥರ ಒತ್ತಾಯ,  ಹೋರಾಟದ ಬಳಿಕ ಪೊಲೀಸರು ಆರೋಪಿ ಪ್ರತಿಕ್ನನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ ಆರೋಪಿ ಕೊಲೆ ನಡೆಸಿದನ್ನು ಬಾಯ್ಬಿಟ್ಟು, 24 ಗಂಟೆ ಕಳೆದರೂ ಪೊಲೀಸರು  ಶವ ಪತ್ತೆಗೆ ಮುಂದಾಗಿಲ್ಲ. ಪ್ರತಿಭಟನೆಯ ಬಳಿಕವಷ್ಟೇ ಪೊಲೀಸರು ಆರೋಪಿಯ ಜತೆ ಬಂದು ಶವ ಪತ್ತೆ ಹಚ್ಚಿದ್ದಾರೆ. ವಿಳಂಬದ ಹಿಂದೆ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರವಿದೆ ಎಂದು ಪ್ರತಿಭಟನ ನಿರತರು ಗುರುತರ ಆರೋಪ ಮಾಡಿದ್ದಾರೆ.


ಪ್ರಕರಣ ಘಟಿಸಿ ವಾರವಾದರೂ ಬಿಳಿನೆಲೆ ಗ್ರಾ.ಪಂ ಅಧ್ಯಕ್ಷರಾಗಲಿ, ಸದಸ್ಯರಾಗಲಿ ಸಂದೀಪ್ಮನೆಗೆ ಬಂದಿಲ್ಲ . ಮನೆಯವರ ನೋವನ್ನು ಆಲಿಸುವ ಯತ್ನ ನಡೆಸಿಲ್ಲ . ತನಿಖೆಯಲ್ಲಿ ಗುರುತರ ಲೋಪವಾಗುತ್ತಿದ್ದರೂ, ಅವರ ಬೆಂಬಲಕ್ಕೆ ನಿಂತಿಲ್ಲ ಎಂದು ಇದೆ ವೇಳೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಿಳಿನೆಲೆ ಗ್ರಾಮದಲ್ಲಿ ಮಾದಕ ವಸ್ತು ಹಾವಳಿ ಕಂಡು ಬರುತ್ತಿದ್ದು, ಕೊಲೆಯ ಹಿಂದೆಯೂ ಡ್ರಗ್ಸ್ಕಮಟು ಕಂಡು ಬರುತ್ತಿದೆ ಇದರ ನಿಯಂತ್ರಣದ ಕಡೆಗೆ ಪಂಚಾಯತ್ಆಸಕ್ತಿ ಹೊಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.


ರಸ್ತೆಯಿಂದ ಶವ ಬಿಸಾಡಿದ ಸ್ಥಳ ಬಹಳಷ್ಟು ದೂರವಿದ್ದು, ಅಷ್ಟು ದೂರ ಶವವನ್ನು ಒಬ್ಬನೇ ವ್ಯಕ್ತಿ ಕೊಂಡು ಹೋಗಲು ಸಾಧ್ಯವಿಲ್ಲ. ಶವ ಸಾಗಿಸಲು ಪ್ರಮುಖ ಆರೋಪಿ ಜತೆ ಇನ್ನಷ್ಟು ಜನ ಕೈ ಜೋಡಿಸಿದ್ದಾರೆ. ಇವರನ್ನು ಪೊಲೀಸ್ಇಲಾಖೆ ತಕ್ಷಣ ಬಂಧಿಸಬೇಕು. ಕೊಲೆಗೆ ಹಾಗೂ ಶವ ವಿಲೇವಾರಿಗೆ ಯಾರೆಲ್ಲ ಸಹಾಯ ಮಾಡಿದ್ದಾರೆಯೋ ಅವರೆನ್ನೆಲ್ಲ ಜೈಲಿಗಟ್ಟಬೇಕು ಎಂದು ಪ್ರತಿಭಟನ ನಿರತ ಗ್ರಾಮಸ್ಥರು ಆಗ್ರಹಿಸಿದರು. ಗ್ರಾ. ಪಂ ಅದ್ಯಕ್ಷೆ ಶಾರದಾ ಹಾಗೂ ಸದಸ್ಯರು ಆಕ್ರೋಶಿತರನ್ನು ಸಮಾಧನಪಡಿಸಲು ಯತ್ನಿಸಿದರು.



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top