




![]() |
ಬಿಳಿನೆಲೆ ಗ್ರಾ.ಪಂ ಅಧ್ಯಕ್ಷೆ ಶ್ರೀ ಮತಿ ಶಾರದಾ ದಿನೇಶ್(kadaba times) |
ಕಡಬ: ಸ್ಥಳೀಯ ಬಿಜೆಪಿಗರು ಸಂದೀಪ್ ಹತ್ಯೆಯನ್ನು ಮುಂದಿಟ್ಟುಕೊಂಡು ಕೀಳುಮಟ್ಟದ ರಾಜಕೀಯ ಮಾಡಿ ಕಾಂಗ್ರೇಸ್ ಮೇಲೆ ಗೂಬೆ ಕೂರಿಸುವ ಕೃತ್ಯ ಮಾಡಿದ್ದಾರೆ ಎಂದು ಬಿಳಿನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀ ಮತಿ ಶಾರದಾ
ದಿನೇಶ್ ಹೇಳಿದ್ದಾರೆ.
ಬುಧವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಲೆ ಆರೋಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಬೀದಿಯಲ್ಲಿ ಬಾಯಿಗೆ ಬಂದ ಹಾಗೆ ಬೈದು ಮುಜುಗರ ಉಂಟು ಮಾಡಿದ್ದರು. ಆದರೂ ನಾನು ಘಟನಾ ಸ್ಥಳಕ್ಕೆ ಹೋಗಿದ್ದೆ, ಬಳಿಕ ಬೆಳಿಗ್ಗೆ ಮೃತನ ಮನೆಗೆ ಹೋಗಿ ಬಂದಿದ್ದೆ. ನಮ್ಮ ಪಂಚಾಯಿತಿ ಎದುರು ಪ್ರತಿಭಟನೆ ಮಾಡಿ ನಾವು ಪ್ರಕರಣದ ವಿಚಾರದಲ್ಲಿ ಯಾವುದಕ್ಕೂ ಹೋಗಿಲ್ಲ ಎನ್ನುವ ಆರೋಪ ಮಾಡಿರುವುದು ನೋವಾಗಿದೆ.
ಪ್ರತಿಭಟನೆ ಮುಗಿದ ಬಳಿಕ ನಾವು ಮೃತನ ಮನೆಗೆ ಹೋಗಿ ಅಂತ್ಯ ಸಂಸ್ಕಾರ ಮುಗಿಯುವ ತನಕ ಅಲ್ಲಿದ್ದೆವು. ಆದರೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರು ಯಾರೂ ಅಲ್ಲಿರಲಿಲ್ಲ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಬೇಕೆಂದು ಪಂಚಾಯಿತಿಯಲ್ಲಿ ನಿರ್ಣಯ ಅಂಗೀಕರಿಸಿ ಸಂಬoಧಪಟ್ಟ ಇಲಾಖೆಗಳಿಗೆ ಕೋರಲಾಗಿದೆ ಎಂದಿದ್ದಾರೆ.