




ಪಿಡಿಒ ಚಿತ್ರಾವತಿ ಅವರು ಪಂಚಾಯತ್ ನಲ್ಲಿ ತಂಬ್ ಕೊಟ್ಟು ಕೆಲಸ ನಿರ್ವಹಿಸುತ್ತಿದ್ದ ವೇಳೆ ಸಿಡಿಲು ಬಡಿದು ಅಸ್ವಸ್ಥಗೊಂಡಿರುವುದಾಗಿ ತಿಳಿದು ಬಂದಿದೆ .
ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೂರು ದಿನದ ಹಿಂದೆ ಕೆಯ್ಯೂರು ಗ್ರಾಮದ ಪಲ್ಲತ್ತಡ್ಕ ನಿವಾಸಿ ಕೂಲಿ ಕಾರ್ಮಿಕ ನಾರಾಯಣ(45ವ)ರವರಿಗೆ ಸಿಡಿಲು ಬಡಿದು ಮೃತಪಟ್ಟ ಘಟನೆ ಡಿ.2ರಂದು ಸಂಜೆ ನಡೆದಿತ್ತು.
ಕಳೆದ ತಿಂಗಳು ನ.17ರಂದು ಸಂಜೆ ಪೆರಮೊಗರು ಮುರಿಯಾಜೆಯಲ್ಲಿ ಕಲ್ಲಡ್ಕ ಶ್ರೀರಾಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸುಭೋದ್ (16ವ) ಮೃತಪಟ್ಟಿದ್ದರು.