


![]() |
ರೈತರಿಗೆ ಮಾಹಿತಿ ನೀಡುತ್ತಿರುವ ಹಿರಿಯ ವಿಜ್ಞಾನಿ ಡಾ. ನಾಗರಾಜ |
ಕಡಬ
ಟೈಮ್ಸ್, ಕಾಣಿಯೂರು: ಎಲ್ಲಾ ರೋಗಕ್ಕೂ
ಮೂಲ ಕಾರಣ ಪೋಷಕಾಂಶಗಳ ಕೊರತೆ ಸರಿಯಾಗಿ ಮಣ್ಣು ಪರೀಕ್ಷೆ ಮಾಡಿ ಗಿಡಗಳಿಗೆ ಪೋಷಕಾಂಶ ನೀಡಬೇಕೆಂದು ಸಿ ಪಿ ಸಿ ಆರ್
ಐ ವಿಟ್ಲದ ಹಿರಿಯ ವಿಜ್ಞಾನಿ ಡಾ. ನಾಗರಾಜ ಅವರು ಹೇಳಿದರು.
ಚಾರ್ವಾಕ
ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಸಿ ಪಿ ಸಿ
ಆರ್ ಐ ವಿಟ್ಲ ಮತ್ತು
ಕೆ ಎಂ ಎಫ್ ಸಹಭಾಗಿತ್ವದಲ್ಲಿ
ಸಂಘದ ಸಭಾಂಗಣದಲ್ಲಿ ನಡೆದ ಅಡಿಕೆ ಎಲೆ
ಚುಕ್ಕಿ ರೋಗದ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ಹಸಿರು ಹುಲ್ಲಿನ ನಿರ್ವಹಣೆ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ
ಪಾಲ್ಗೊಂಡು ಮಾತನಾಡಿದರು.
ಅಡಿಕೆ ತೋಟಕ್ಕೆ ಬಾಧಿಸುವ ಎಲ್ಲಾ ರೋಗಕ್ಕೂ ಮದ್ದುಗಳನ್ನು ನಮ್ಮ ವಿಜ್ಞಾನಿಗಳು ಕಂಡು ಹಿಡಿಯುತ್ತಾರೆ , ಆದ್ದರಿಂದ ರೈತರು ಆತಂಕ ಪಡದೆ ರೋಗ ನಿರೋಧಕ ತಳಿಗಳನ್ನು ನಾಟಿ ಮಾಡಿ ಅಲ್ಲದೆ ಎಲೆ ಚುಕ್ಕಿ ರೋಗಕ್ಕೆ ಕೇಂದ್ರ ಸರಕಾರ ಶಿಫಾರಸ್ಸು ಮಾಡಿದ ಮದ್ದುಗಳ ಬಗ್ಗೆ ಮಾಹಿತಿ ನೀಡಿದರು.
ಹಸಿರು ಹುಲ್ಲಿನ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದ ಪಶು ಆಹಾರ ಮತ್ತು ಮೇವು ವಿಭಾಗದ ಉಪ ವ್ಯವಸ್ಥಾಪಕಿ ಶ್ರೀಮತಿ ಶ್ರುತಿ ಅವರು ಖಾಲಿ ಜಾಗ ಮತ್ತು ಅಡಿಕೆ ತೋಟಗಳ ಮಧ್ಯೆ ಬೇರೆ ಬೇರೆ ತಳಿಯ ಹುಲ್ಲಿನ ಇಳುವರಿ ಬಗ್ಗೆ ಸಮಗ್ರ ಮಾಹಿತಿ ನೀಡಿದರು
ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸತ್ಯನಾರಾಯಣ ಕಲ್ಲುರಾಯ ಉದ್ಘಾಟಿಸಿದರು. ಕಾಣಿಯೂರು ಗ್ರಾ.ಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ, ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ,ಪಿ ಎಲ್ ಡಿ ಬ್ಯಾಂಕ್ ನ ನಿರ್ದೇಶಕ ದೇವಯ್ಯ ಕಂಡಿಗ, ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷ ಕುಸುಮಾದರ ಇಡ್ಯಡ್ಕ, ನಿಕಟ ಪೂರ್ವ ಅಧ್ಯಕ್ಷ ಧನಂಜಯ ಕೇನಾಜೆ, ನಿಕಟಪೂರ್ವ ಉಪಾಧ್ಯಕ್ಷ ಬಾಲಕೃಷ್ಣ ಇಡ್ಯಡ್ಕ, ಕಾರ್ಯದರ್ಶಿ ದಮಯಂತಿ ಮುದುವ, ಅಧ್ಯಕ್ಷ ಸತೀಶ್ ಕಲ್ಲುರಾಯ , ನಿರ್ದೇಶಕ ವಸಂತ ದಲಾರಿಯ ಸೇರಿದಂತೆ ಪ್ರಮುಖರು ಹಾಜರಿದ್ದರು.