ಧರ್ಮಸ್ಥಳ ಬಳಿ ಬೈಕ್-ಕಾರು ನಡುವೆ ಅಪಘಾತ: ಕಡಬದ ಇಬ್ಬರು ಆಸ್ಪತ್ರೆಗೆ ದಾಖಲು

Kadaba Times News



ಕಡಬ ಟೈಮ್,  ಧರ್ಮಸ್ಥಳ :  ಧರ್ಮಸ್ಥಳ ಗ್ರಾಮದ ಕಲ್ಲೇರಿ ಎಂಬಲ್ಲಿ ಬೈಕ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಾದ ಕಡಬದ ನಿವಾಸಿಗಳಿಬ್ಬರು ಗಾಯಗೊಂಡಿರುವ ಘಟನೆ ಡಿ.24ರಂದು ಸಂಜೆ ನಡೆದಿದೆ.


ಕಡಬ ಸಮೀಪದ ಬಂಟ್ರ ಕರಂಬಿತ್ತಲ್ ನಿವಾಸಿ ಲೋಕಯ್ಯ ಗೌಡ  ಮತ್ತು  ಸಹದ್ಯೋಗಿ ವಿಶ್ವನಾಥ ಅವರು ಗಾಯಗೊಂಡು ಆಸ್ಪತ್ರ್ರೆಗೆ ದಾಖಲಾದವರು.


 ಧರ್ಮಸ್ಥಳದ ಅನ್ನಛತ್ರ ಕಡೆಯಿಂದ ಕಲ್ಲೇರಿ ಕಡೆಗೆ ಏಕಮುಖ ಸಂಚಾರ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಹೋಗುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಕಾರು  ನಡುವೆ ಡಿಕ್ಕಿ ಸಂಭವಿಸಿದೆಘಟನೆಯಲ್ಲಿ ಸಹಸವಾರನ   ಕಾಲಿಗೆ ಗಾಯವಾಗಿದ್ದು ಸವಾರನ  ತಲೆಗೆ ಗುದ್ದಿದ ಗಾಯವಾಗಿದೆ.


ಓರ್ವ  ಉಜಿರೆಯ  ಖಾಸಗಿ  ಆಸ್ಪತ್ರೆಗೆ ದಾಖಲಾದರೆ ಮತ್ತೋರ್ವರು  ಮಂಗಳೂರಿನ ಕೆಎಸ್ ಹೆಗ್ಗಡೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.   ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ .ಕ್ರ: 121/2024 ಕಲಂ: 281, 125() ಬಿಎನ್ಎಸ್ರಂತೆ ಪ್ರಕರಣ ದಾಖಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top