ಕೆರೆಮೂಲೆ ಮೇಸ್ತ್ರೀ ಸಹಾಯಕ ಶಿವಪ್ಪರವರ ಸಾವಿನ ಪ್ರಕರಣ: ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಕೆರೆಮೂಲೆ ಮೇಸ್ತ್ರೀ ಸಹಾಯಕ ಶಿವಪ್ಪರವರ ಸಾವಿನ ಪ್ರಕರಣ: ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Kadaba Times News


 ಕಡಬ ಟೈಮ್ ,ಪುತ್ತೂರು:  ಕೆರೆಮೂಲೆಯಲ್ಲಿ ಕೂಲಿ ಕಾರ್ಮಿಕನ ಶಿವಪ್ಪ ಅವರ ಮೃತದೇಹವನ್ನು ರಸ್ತೆ ಬದಿಯಲ್ಲಿ ಇರಿಸಿ ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಹೆನ್ರಿ ತಾವ್ರೋ ಸಹಿತ ಮೂವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.


ನ. 24 ರ ಸಂಜೆ  ಭೀಮ್ ಆರ್ಮಿಯ ರಾಜ್ಯಾಧ್ಯಕ್ಷ  ಮತೀನ್  ಕುಮಾರ್, ಕಾರ್ಯಧ್ಯಕ್ಷ ಪ್ರದೀಪ್ ಎಚ್, ಉಪಾಧ್ಯಕ್ಷ  ಜಯಕುಮಾರ್ ಹಾದಿಗೆ, ರಾಜ್ಯ ಸಂಘಟನೆಯ  ಹಲವಾರು ನಾಯಕರು ಮೃತ ಕುಟುಂಬದ ಮನೆ ಭೇಟಿ ಮಾಡಿ ಮಾಹಿತಿ ಪಡೆದು ಬಳಿಕ   ಡಿವೈಎಸ್ಪಿ ಕಛೇರಿಗೆ ಭೇಟಿ ನೀಡಿ ಚರ್ಚಿಸಿದ್ದರು.


ಪ್ರಕರಣ ನಡೆದು ಅಟ್ರಾಸಿಟಿ ಕೇಸ್ ದಾಖಲಾಗಿ 8 ದಿನ ಕಳೆದರೂ ಆರೋಪಿಯನ್ನು ಬಂಧಿಸುವಲ್ಲಿ ವಿಫಲವಾದ ಪುತ್ತೂರು ನಗರ ಪೊಲೀಸ್  ಅಧಿಕಾರಿಗಳಿಗೆ  ಗಂಟೆಯೊಳಗೆ ಆರೋಪಿಗಳನ್ನು ಬಂಧನ ಮಾಡಬೇಕು  ಎಂದು ಎಚ್ಚರಿಕೆ ನೀಡಿದ್ದರು.



ನಂತರದ ಬೆಳವಣಿಗೆಯಲ್ಲಿ   ಡಿವೈಎಸ್ಪಿಯವರು ಓರ್ವ ಆರೋಪಿಯನ್ನು ಹಿಂದೆಯೇ ಬಂದಧಿಸಿದ್ದು ಉಳಿದವರನ್ನು ಬಂಧನ ಮಾಡಿರುವ ಬಗ್ಗೆ ಸ್ಪಷ್ಟಪಡಿಸಿದರು.


ಸಹಾಯಕ ಕೂಲಿ ಕಾರ್ಮಿಕ ಶಿವಪ್ಪ ಅವರ ಮೃತ ದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆಯ ಮುಂದಿನ ರಸ್ತೆ ಸಮೀಪ ಅಮಾನವೀಯ ರೀತಿಯಲ್ಲಿ ಇರಿಸಿ ಹೋದ ಘಟನೆ ನಡೆದಿದ್ದು, ಹಿನ್ನೆಲೆಯಲ್ಲಿ ಶಿವಪ್ಪ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲಕ ಹೆನ್ರಿ ತಾವ್ರೋ ಅವರ ಸಹಿತ ಮೂವರ ವಿರುದ್ದ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಸ್ಕ್ಯಾನಿ ಮೇಸ್ತ್ರಿ ಎಂಬವರನ್ನು ಆರಂಭದಲ್ಲಿ ಬಂಧಿಸಿದ್ದರು. ನಡುವೆ ಪ್ರಕರಣಕ್ಕೆ ಸಂಬಂಧಿಸಿ ಹೆನ್ರಿ ತಾವ್ರೋ ಅವರ ಪುತ್ರನ ವಿರುದ್ಧವೂ ಆದಿ ದ್ರಾವಿಡ ಸಂಘಟನೆ ಪೊಲೀಸರಿಗೆ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಹೆನ್ರಿ ತಾವ್ರೋ ಪುತ್ರ ಕಿರಣ್ ಮತ್ತು ಸಹಾಯಕ ಪ್ರಕಾಶ್ ಎಂಬವರನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಹೆನ್ರಿ ತಾವೋ ಅವರ ಬಂಧನಕ್ಕೆ ಆಗ್ರಹಿಸಿ ಆದಿ ದ್ರಾವಿಡ ಸೇವಾ ಸಂಘ ಪ್ರತಿಭಟನೆಯನ್ನೂ ಹಮ್ಮಿಕೊಂಡಿತ್ತು.


 

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top