ಕುಕ್ಕೆ ದೇಗುಲದಲ್ಲಿ ಸಿಬ್ಬಂದಿಗಳ  ಪ್ರಾಮಾಣಿಕತೆ:  ಪ್ರಶಂಸನಾ ಪತ್ರ ನೀಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ ಆಡಳಿತಾಧಿಕಾರಿ

Kadaba Times News

 


ಕುಕ್ಕೆ ಸುಬ್ರಹ್ಮಣ್ಯ:  ಕುಕ್ಕೆ ದೇಗುಲಕ್ಕೆ ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದಾರೆ .ಕಳೆದ ಒಂದು ವಾರದಲ್ಲಿ ಹಣ ಕಳೆದುಕೊಂಡ ಮೂರು  ಘಟನೆಗಳಲ್ಲಿ  ಯಾತ್ರಾರ್ಥಿಗಳಿಗೆ  ಮರಳಿ ಹಣವನ್ನು ನೀಡುವ ಮೂಲಕ ಪ್ರಾಮಾಣಿಕತೆ ಮೆರೆದು ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.


ಇದನ್ನು ಗಮನಿಸಿದ   ದೇಗುಲದ  ಆಡಳಿತಾಧಿಕಾರಿ ಜೂಬಿನ್ ಮಹಾಪಾತ್ರ ಅವರು ಕರ್ತವ್ಯದ ನಡುವೆ ಪ್ರಾಮಾಣಿಕತೆ ಮೆರೆಯುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಸಿಬ್ಬಂದಿಗಳಿಗೆ  ಆಡಳಿತ ಮಂಡಳಿ ವತಿಯಿಂದ  ಪ್ರಶಂಸನಾ ಪತ್ರಗಳನ್ನು ನೀಡುವ ಮೂಲಕ ಅವರನ್ನು ಗೌರವಿಸಿದ್ದೇವೆ ಎಂದಿದ್ದಾರೆ.


ಇತ್ತೀಚೆಗೆ ದೇವಸ್ಥಾನದ ಸಿಬ್ಬಂದಿಗಳಿಗೆ ಮೃದುಕೌಶಲ್ಯ ಹಾಗೂ ಶಿಸ್ತು ಕ್ರಮಗಳ ಕುರಿತು ಕಾರ್ಯಾಗಾರ ಏರ್ಪಡಿಸಿದ್ದರು.   

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top