


ಕಡಬ ಟೈಮ್, ಗುಂಡ್ಯ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಶುಕ್ರವಾರ ಗುಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು ಮನವಿ ಸ್ವೀಕರಿಸಲು ಸ್ಥಳಕ್ಕೆ ಬಾರದ ಅಧಿಕಾಗಳ ವಿರುದ್ದ ಆಕ್ರೋಶ ವ್ಯಕ್ತವಾಗಿ
ಪ್ರತಿಭಟನಕಾರರು ಹೆದ್ದಾರಿ ತಡೆಗೆ ಮುಂದಾದ ಘಟನೆ ನಡೆದಿದೆ.
ಮಾನ್ಯ
ಜಿಲ್ಲಾಧಿಕಾರಿಗಳು ಮತ್ತು ಸಹಾಯಕ ಆಯುಕ್ತರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಕಾರರು ಸಾಂಕೇತಿಕ
ಪ್ರತಿಭಟನೆಗೆ ಮುಂದಾಗಿದ್ದಾರೆ. ಸ್ಥಳದಲ್ಲಿದ್ದ ಅಧಿಕಾರಿಗಳು ಸಮರ್ಪಕ ಉತ್ತರ ನೀಡಿದ ಕಾರಣ ಸುಳ್ಯ
ಶಾಸಕಿ ಭಾಗೀರಥಿ ಮುರುಳ್ಯ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಾ ನಿರತರ ಜೊತೆ ಹೆದ್ದಾರಿಯಲ್ಲಿ ಕುಳಿತ್ತಿದ್ದಾರೆ.
ಪ್ರತಿಭಟನೆಯ
ಸ್ವರೂಪ ಬದಲಾಗುತ್ತಿದ್ದಂತೆ ರಸ್ತೆಗಿಳಿದ ಪ್ರಮುಖ ನಾಯಕರನ್ನು ಪೊಲೀಸರು ಮನವೊಲಿಸಲು ಯತ್ನಿಸಿದರೂ
ಯಾವುದೇ ಫಲಕಾಣದೆ ರಸ್ತೆ ತಡೆಯ ಹಂತಕ್ಕೆ ತಲುಪಿದೆ.
ಸದ್ಯ
ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದೆ, ಹೆಚ್ಚಿನ ಮಾಹಿತಿ ಪಡೆಯಾಗುತ್ತಿದೆ.