


ಕಡಬ ಟೈಮ್ : ಶ್ರಮಿಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಸರಕಾರ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯ ಕಡಿತಗೊಳಿಸಿರುವುದನ್ನು ಖಂಡಿಸಿ ಸೋಮವಾರ ಕಡಬ ತಹಸೀಲ್ದಾರ್ ಕಛೇರಿ ಎದುರು ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕಡಬ
ಪಂಜ ರಸ್ತೆಯಲ್ಲಿರುವ ಕಾರ್ಮಿಕ ನಿರೀಕ್ಷಕರ ಕಛೇರಿ ಎದುರಿನಿಂದ ಮೆರವಣಿಗೆಯಲ್ಲಿ ಸಾಗಿ ತಹಸೀಲ್ದಾರ್
ಕಛೇರಿ ಎದುರು ಪ್ರತಿಭಟನಾ ಸಭೆ ನಡೆಸಿ ಬಳಿಕ ತಹಸೀಲ್ದಾರ್ ಪ್ರಭಾಕರ ಖಜೂರೆ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು. ಈ
ಸಂದರ್ಭದಲ್ಲಿ ಮಾತನಾಡಿದ ಶ್ರಮಿಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಮೋಹನ್
ಕೆ.ಪಿ. ರಾಜ್ಯ ಸರಕಾರ ಕಾರ್ಮಿಕರಿಗೆ ನೀಡುವ ಸವಲತ್ತುಗಳನ್ನು ಕಸಿದುಕೊಂಡು ಶೋಷಣೆ ಮಾಡುತ್ತಿದೆ ಎಂದು
ಅಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿAದ
೨೦೨೧-೨೨ ರವರೆಗೆ ಕಾರ್ಮಿಕರಿಗೆ ಉತ್ತಮ ಸೌಲಭ್ಯ ದೊರೆಯುತ್ತಿತ್ತು. ಆದರೆ ೨೦೨೨-೨೩ ರಲ್ಲಿ ಕಾರ್ಮಿಕರ
ಮಕ್ಕಳ ಶೈಕ್ಷಣಿಕ ಧನ ಸಹಾಯ ಕೆಲವರಿಗೆ ಮಾತ್ರ ವಿತರಿಸಲಾಯಿತು. ೨೦೨೨-೨೩ ರಿಂದ ಧನ ಸಹಾಯದಲ್ಲಿ ಭಾರಿ
ಕಡಿತ ಮಾಡಲಾಯಿತು. ಅಂದರೆ ಒಂದನೇ ತರಗತಿ ಮಕ್ಕಳಿಗೆ ನೀಡುತ್ತಿದ್ದ ರೂ. ೫೦೦೦/- ವನ್ನು ರೂ.೧೮೦೦/-
ಕ್ಕೂ. ಅತ್ಯುನ್ನತ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ನೀಡುತ್ತಿದ್ದ ರೂ.೭೫,೦೦೦.೦೦/-
ವನ್ನು ಕೇವಲ ರೂ ೧೧೦೦೦/- ಕ್ಕೂ ಕಡಿತಗೊಳಿಸಲಾಯಿತು. ಮಾತ್ರವಲ್ಲದೆ ಶೈಕ್ಷಣಿಕ ಧನ ಸಹಾಯಕ್ಕೆ ಅರ್ಜಿ
ಸಲ್ಲಿಸಲು ೨೦೨೩-೨೪ ಮತ್ತು ೨೦೨೪-೨೫ ರಲ್ಲಿ ಇನ್ನೂ ಕೂಡಾ ಎಸ್ ಎಸ್ ಪೋರ್ಟಲ್ ವ್ಯವಸ್ಥೆ ಸರಿಯಾಗದೆ
ಲಕ್ಷಾಂತರ ವಿಧ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಆಸ್ಪತ್ರೆ ಬಿಲ್ಲುಗಳಲ್ಲಿ ಕೇವಲ ಶೇಕಡ ೧೦% ರಷ್ಟು
ಮಾತ್ರ ಪಾವತಿಗೆ ಮಂಜೂರಾತಿ ನೀಡುತ್ತಿದ್ದಾರೆ. ಕಲ್ಯಾಣ ಮಂಡಳಿಯಲ್ಲಿ ಅನೇಕ ವಿವಿಧ ಸೌಲಭ್ಯಗಳನ್ನು
ಘೋಷಿಸಿಕೊಂಡಿದ್ದರೂ ಕೆಲವೇ ಕೆಲವು ಸೌಲಭ್ಯಗಳನ್ನು ಮಾತ್ರ ನೀಡುತ್ತಿದ್ದಾರೆ. ಸಮಸ್ಯೆ ಪರಿಹರಿಸಬೇಕಿದ್ದ ಕಾಮಿಕ ಸಚಿವ ಸಂತೋಷ್ ಲಾಡ್ ಸುಮ್ಮನಿದ್ದಾರೆ. ಸಮಸ್ಯೆಗಳನ್ನು ಹದಿನೈದು ದಿನಗಳ ಒಳಗೆ ಪರಿಹರಿಸಿ ಕಟ್ಟಡ ಕಾರ್ಮಿಕರಿಗೆ
ನ್ಯಾಯ ಒದಗಿಸಿ ಕೊಡಬೇಕು, ತಪ್ಪಿದಲ್ಲಿ ಬೆಂಗಳೂರು ಚಲೋ ಮಾಡಿ ವಿಧಾನ ಸೌಧ ಮುತ್ತಿಗೆ ಹಾಕಲಗುವುದು
ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ
ಶ್ರಮಿಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಶಿವಶಂಕರ್ ಕೆ, ಕಾರ್ಯದರ್ಶಿ ಪುರುಷೋತ್ತಮ
ಸಣ್ಣಾರ, ಖಜಾಂಜಿ ಗಿರಿಯಪ್ಪ ಗೌಡ ಚಿದ್ಗಲ್, ಪ್ರಮುಖರಾದ
ಅಬ್ದುಲ್ ಲತೀಫ್ ಕಳಾರ, ಹಾರಿಶ್ ಕಳಾರ, ಅವಿನ್ ಮರ್ಧಾಳ,
ಗುಡ್ಡಪ್ಪ ಗೌಡ ಅಮೈ, ಗಣೇಶ್ ಚಿದ್ಗಲ್, ಸಜಿ ನೆಟ್ಟಣ, ದೇವಪ್ಪ, ಪ್ರಕಾಶ್, ಪ್ರಶಾಂತ್, ಸೀತಾರಾಮ
ಕೊಂಬಾರು, ವಿನೋದ್ ಕುಮಾರ್ ಮರ್ಧಾಳ, ಅನಿಲ್ ಕುಮಾರ್ ನೆಟ್ಟಣ ಮತ್ತಿತರರು ಭಾಗವಹಿಸಿದ್ದರು.