


ಕಡಬ ಟೈಮ್, ಸುಳ್ಯ: ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವ ವೇಳೆ ಕಾಡು ಹಂದಿ ತಿವಿದು ಮಹಿಳೆಯೊಬ್ಬರು ಗಾಯಗೊಂಡ ಘಟನೆ ಸುಳ್ಯದಲ್ಲಿ ಬುಧವಾರ ಮುಂಜಾನೆ ನಡೆದಿರುವ ಬಗ್ಗೆ ವರದಿಯಾಗಿದೆ.
ದುಗ್ಗಲಡ್ಕ ದಲ್ಲಿ ಈ
ಘಟನೆ ನಡೆದಿದ್ದು ಕೆಎಫ್ ಡಿಸಿ ರಬ್ಬರ್ ಪ್ಲಾಂಟೇಷನ್ ನಲ್ಲಿ ಕೂಟೇಲು ಸಿಆರ್ ಸಿ ಯ ಅಂಬಿಕಾ ಎಂಬವರು ದುಗ್ಗಲಡ್ಕ ರಬ್ಬರ್ ತೋಟದಲ್ಲಿ ಸುಮಾರು 7 ಗಂಟೆ ಹೊತ್ತಿಗೆ ಟ್ಯಾಪಿಂಗ್ ನಡೆಸುತ್ತಿದ್ದರು.
ಈ ಸಮಯದಲ್ಲಿ ಪೊದೆಗಳ ಮಧ್ಯೆಯಿದ್ದ ಕಾಡುಹಂದಿಯೊಂದು
ಏಕಾಏಕಿ ಬಂದು ಮಹಿಳೆಗೆ ತಿವಿದಿದೆ ಎಂದು ತಿಳಿದು ಬಂದಿದೆ.
ಈ ಘಟನೆಯಿಂದ ಮಹಿಳೆಯ
ಕಾಲಿಗೆ ಗಾಯವಾಗಿದ್ದು,ತಕ್ಷಣ ಸುಳ್ಯದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತೆಂದು ತಿಳಿದು
ಬಂದಿದೆ .ಸುಳ್ಯ ರೆಸ್ಟೋರೆಂಟ್ ಕೆಎಫ್ ಡಿ ಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂತಹ ಘಟನೆ ಸಂಭವಿಸುತ್ತದೆ ಎಂದು ಕಾರ್ಮಿಕರು ದೂರಿಕೊಂಡಿದ್ದಾರೆ.