


![]() |
ಬಿ.ಎಂ ಭಟ್ ಮಾತನಾಡುತ್ತಿರುವುದು(kadaba times) |
ಕಡಬ: ಕೌಕ್ರಾಡಿ ಗ್ರಾ.ಪಂ ಕಾಪಿನ ಬಾಗಿಲು ಎಂಬಲ್ಲಿ ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ ಸಂಬಂಧಿಸಿ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಬುಧವಾರ ಕಡಬ ತಹಶೀಲ್ದರ್ ಕಚೇರಿ ಮುಂದೆ ಪ್ರತಿಭಟನೆ ಆರಂಭಗೊಂಡಿದೆ.
ಸ್ಥಳಕ್ಕೆ ಆಗಮಿಸಿದ
ವಕೀಲ ಬಿ.ಎಂ ಭಟ್ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ತಹಶೀಲ್ದಾರ್ ಅವರಿಗೆ ಕನ್ನಡ ಓದಲು ಬರುವುದಿಲ್ಲ. ರಾಧಮ್ಮನ ಮನೆ ಧ್ವಂಸ
ವಿಚಾರಕ್ಕೆ ಬಂದಿರುವುದು. ಅಧಿಕಾರಿಗಳಿಗೆ ಬೇರೆಯೇ ಮಾಹಿತಿ ರವಾನಿಸಿದ್ದಾರೆ.
ರೇಣುಕಾ ಅವರ ವಿಚಾರಕ್ಕೆ
ನಾವು ಬರುವುದಿಲ್ಲ. ಪ್ರತಿಭಟನೆಗೆ ಪರ್ಮಿಷನ್ ಕೇಳುವ ಪ್ರಮೇಯ ಬಂದಿಲ್ಲ. ಪೊಲೀಸರು ಮೈಕ್ ಪರ್ಮಿಷನ್ ಕೊಟ್ಟಿಲ್ಲ, ದಲಿತರ ಮನೆ
ಧ್ವಂಸ ಆದಾಗ ಮೈಕಕ್ಕೂ ಅಸ್ಪೃಶ್ಯತೆ ಆಗುತ್ತಾ ಗೊತ್ತಿಲ್ಲ,
ಒಳಗೆ ಪ್ರತಿಭಟನೆ ಮಾಡಲು ಅವಕಾಶವಿಲ್ಲ ಎನ್ನುತ್ತಾರೆ, ಹಿಂದಿನ ಕಾಲದಲ್ಲಿ
ದಲಿತರು ಒಳಗೆ ಬಾರಬಾರದು ಅವರ ನೆರಳು ಬೀಳಬಾರದೆಂಬ ನಿಯಮಗಳಿದ್ದವು, ಅಂತಹ ಪರಿಸ್ಥಿತಿಯಾಗಿದೆ.
ನಮಗೆ ಗಲಾಟೆ ಮಾಡಿ ಗೊತ್ತಿಲ್ಲ, ನಮಗೆ ನ್ಯಾಯ ಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಮಾನ ಮನಸ್ಕರು ಪ್ರತಿಭಟನೆ
ಕೈ ಜೋಡಿಸಿದ್ದಾರೆ. ಪೊಲೀಸರು ಬ್ಯಾರಿಕೇಟ್ ಅಳವಡಿಸಿ ಮಿನಿ ವಿಧಾನ ಸೌಧಕ್ಕೆ ತೆರಳುವ ದಾರಿಯನ್ನು
ಮುಚ್ಚಿದ್ದಾರೆ.
![]() |