




ಕಡಬ: ನಾನು ಕೊಟ್ಟ ಅರ್ಜಿಗೆ ಕಡಬದ ಸರ್ವೆಯರು ನಾಲ್ಕು ತಿಂಗಳು ಕುಣಿಸಿದ್ದಾರೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಯಂ. ವೆಂಕಪ್ಪ ಗೌಡ ತನಗಾದ ಅನುಭವ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಗುಂಡ್ಯದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ .ನಮಗೆ ಉಪಗ್ರಹ ಆಧಾರಿತ ಸರ್ವೆಯ ಅಗತ್ಯವಿಲ್ಲ, ಮ್ಯಾನುವೆಲ್ ಸರ್ವೆಯ ಅಗತ್ಯವಿದೆ ಎನ್ನುತ್ತಾ ಜಂಟಿ ಸರ್ವೆ ಮಾಡಬೇಕೆಂದರೆ ಅದು ನಮ್ಮ ಸರ್ವೇಯರ್ ಮಾಡ್ತರೆ ಎಂದು ನಾನು ನಂಬುವುದಿಲ್ಲ, ನಾನೊಬ್ಬ ವಕೀಲನಾಗಿದ್ದು ಪಟ್ಟಾ ಜಾಗದ ಪ್ಲಾಟಿಂಗ್ ಮಾಡಲು ಅರ್ಜಿಯನ್ನು ಕೊಟ್ಟಿದ್ದೆ , ನಾಲ್ಕು ತಿಂಗಳು ಕಡಬದ ಸರ್ವೆಯರು ನನ್ನನ್ನು ಕುಣಿಸಿದ್ದಾರೆ. ಈ ಸರ್ವೇಯರ್ ನ ಜೀವಮಾನದಲ್ಲಿ ಜಂಟಿ ಸರ್ವೆ ಮಾಡಲು ಸಾಧ್ಯವಿಲ್ಲ ಎಂದ್ದಿದ್ದಾರೆ.
ಅಲ್ಲದೆ ನಾಲು ದೂರದ ಸುಳ್ಯದಿಂದ ನಾಲ್ಕು ಬಾರಿ ಕಡಬಕ್ಕೆ ಬಂದಿದ್ದೇನೆ, ನಮ್ಮದೇ ಸರ್ಕಾರವಿದೆ ನಾನು ಭಾಗಿಯಾಗಿದ್ದೇನೆ , ನೀವು ನನ್ನಂತವನಿಗೆ ಕೆಲಸ ಮಾಡಿ ಕೊಟ್ಟಿಲ್ಲ ಅಂದರೆ ಪಾಪದವರಿಗೆ ನಿಮ್ಮಿಂದ ಕೆಲಸ ಮಾಡಿಕೊಡಲು ಸಾಧ್ಯನಾ ಎಂದು ಪ್ರಶ್ನಿಸಿದ್ದೆ ಎಂದು ಭಾಷಣದಲ್ಲಿ ಹೇಳಿದ್ದರಾರೆ.
ಮುಂದುವರಿದು ಜಿಲ್ಲಾ ಮಂತ್ರಿಗಳು ಬಂದಾಗ ನಿಮ್ಮ ವಿರುದ್ದ ದೂರು ನೀಡುತ್ತೇನೆ, ಸರ್ವೆ ಮಾಡಿ ಕೊಡಿ ಎಂದು ಹೇಳಿದ್ದೇನೆ ಎಂದಿದ್ದಾರೆ.