ಕಾಂಗ್ರೆಸ್ ಮುಖಂಡನನ್ನೇ ನಾಲ್ಕು ಬಾರಿ ಅಳೆದಾಡಿಸಿದ ಕಡಬದ ಸರ್ವೇಯರ್ : ಯಾವ ಅರ್ಜಿ ಕೊಟ್ಟಿದ್ದರು?

ಕಾಂಗ್ರೆಸ್ ಮುಖಂಡನನ್ನೇ ನಾಲ್ಕು ಬಾರಿ ಅಳೆದಾಡಿಸಿದ ಕಡಬದ ಸರ್ವೇಯರ್ : ಯಾವ ಅರ್ಜಿ ಕೊಟ್ಟಿದ್ದರು?

Kadaba Times News

 

ಕಾಂಗ್ರೆಸ್ ಮುಖಂಡ ವೆಂಕಪ್ಪ ಗೌಡ

ಕಡಬ: ನಾನು ಕೊಟ್ಟ ಅರ್ಜಿಗೆ   ಕಡಬದ ಸರ್ವೆಯರು ನಾಲ್ಕು ತಿಂಗಳು ಕುಣಿಸಿದ್ದಾರೆ ಎಂದು ಕೆಪಿಸಿಸಿ  ಮಾಜಿ ಕಾರ್ಯದರ್ಶಿ ಯಂ. ವೆಂಕಪ್ಪ ಗೌಡ ತನಗಾದ ಅನುಭವ ಹಂಚಿಕೊಂಡಿದ್ದಾರೆ.


ಇತ್ತೀಚೆಗೆ ಗುಂಡ್ಯದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ .ನಮಗೆ ಉಪಗ್ರಹ ಆಧಾರಿತ ಸರ್ವೆಯ ಅಗತ್ಯವಿಲ್ಲ,  ಮ್ಯಾನುವೆಲ್ ಸರ್ವೆಯ ಅಗತ್ಯವಿದೆ ಎನ್ನುತ್ತಾ ಜಂಟಿ ಸರ್ವೆ ಮಾಡಬೇಕೆಂದರೆ ಅದು ನಮ್ಮ ಸರ್ವೇಯರ್   ಮಾಡ್ತರೆ ಎಂದು ನಾನು ನಂಬುವುದಿಲ್ಲ, ನಾನೊಬ್ಬ ವಕೀಲನಾಗಿದ್ದು   ಪಟ್ಟಾ ಜಾಗದ ಪ್ಲಾಟಿಂಗ್ ಮಾಡಲು ಅರ್ಜಿಯನ್ನು  ಕೊಟ್ಟಿದ್ದೆ ,  ನಾಲ್ಕು ತಿಂಗಳು ಕಡಬದ ಸರ್ವೆಯರು  ನನ್ನನ್ನು  ಕುಣಿಸಿದ್ದಾರೆ.   ಈ ಸರ್ವೇಯರ್ ನ  ಜೀವಮಾನದಲ್ಲಿ ಜಂಟಿ ಸರ್ವೆ ಮಾಡಲು ಸಾಧ್ಯವಿಲ್ಲ ಎಂದ್ದಿದ್ದಾರೆ.


ಅಲ್ಲದೆ ನಾಲು ದೂರದ ಸುಳ್ಯದಿಂದ ನಾಲ್ಕು ಬಾರಿ ಕಡಬಕ್ಕೆ ಬಂದಿದ್ದೇನೆ,   ನಮ್ಮದೇ ಸರ್ಕಾರವಿದೆ ನಾನು ಭಾಗಿಯಾಗಿದ್ದೇನೆ ,  ನೀವು ನನ್ನಂತವನಿಗೆ ಕೆಲಸ ಮಾಡಿ ಕೊಟ್ಟಿಲ್ಲ ಅಂದರೆ ಪಾಪದವರಿಗೆ ನಿಮ್ಮಿಂದ ಕೆಲಸ ಮಾಡಿಕೊಡಲು ಸಾಧ್ಯನಾ ಎಂದು ಪ್ರಶ್ನಿಸಿದ್ದೆ ಎಂದು ಭಾಷಣದಲ್ಲಿ ಹೇಳಿದ್ದರಾರೆ.


ಮುಂದುವರಿದು ಜಿಲ್ಲಾ ಮಂತ್ರಿಗಳು ಬಂದಾಗ ನಿಮ್ಮ ವಿರುದ್ದ ದೂರು ನೀಡುತ್ತೇನೆ, ಸರ್ವೆ ಮಾಡಿ ಕೊಡಿ ಎಂದು ಹೇಳಿದ್ದೇನೆ ಎಂದಿದ್ದಾರೆ. 


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top