ನೆಲ್ಯಾಡಿ: ಶಾಸ್ತಾರ ಫ್ರೆಂಡ್ಸ್ ವತಿಯಿಂದ ಹಿಂದೂ ಕ್ರೀಡೊತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ನೆಲ್ಯಾಡಿ: ಶಾಸ್ತಾರ ಫ್ರೆಂಡ್ಸ್ ವತಿಯಿಂದ ಹಿಂದೂ ಕ್ರೀಡೊತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Kadaba Times News

 

ಆಮಂತ್ರಣ ಪತ್ರಿಕೆ ಬಿಡುಗಡೆಯ ಸಂದರ್ಭ

ಕಡಬ ಟೈಮ್, ನೆಲ್ಯಾಡಿ:ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದ  ಶಾಸ್ತಾರ ಫ್ರೆಂಡ್ಸ್ ವತಿಯಿಂದ  ಹಿಂದೂ ಕ್ರೀಡೊತ್ಸವ 2025 ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಶ್ರೀ ಕ್ಷೇತ್ರ ದೈಯೇರ ಮಜಲಿ ನಲ್ಲಿ ನಡೆಯಿತು.


ಶ್ರೀ ಶಾಸ್ತಾರೇಶ್ವರ ದೇವಸ್ಥಾನದ  ಆಡಳಿತ ಸಮಿತಿ ಅಧ್ಯಕ್ಷ  ಸುಂದರ ಗೌಡ ಅತ್ರಿಜಾಲು ಕರ ಪತ್ರ ಬಿಡುಗಡೆಗೊಳಿಸಿದರು. ದೈವಸ್ಥಾನದ ಅಧ್ಯಕ್ಷ  ಸತೀಶ್ಚಂದ್ರ ಅತ್ರಿಜಾಲು ಕ್ರೀಡಾಂಗಣದ ಕೆಲಸ ಕಾರ್ಯಗಳಿಗೆ ಚಾಲನೆ ನೀಡಿದರು. ಹಿರಿಯರಾದ ಕೊರಗಪ್ಪ ಗೌಡ ಬಾಯ್ತ್ರೋಡಿ ಹಾಗೂ ಶೀನಪ್ಪ ಗೌಡ ಬರಮೇಲು ಶುಭ ಹಾರೈಸಿದರು .

 


ಜನವರಿ 26ರಂದು ಹಿಂದೂ ಸಂಘಟನೆ ಹಾಗೂ  ಊರವರ ಸಹಕಾರದೊಂದಿಗೆ  ಶ್ರೀ ಕ್ಷೇತ್ರ ದೈಯೆರ ಮಜಲು, ದೈವಗಿರಿ, ಬೊಣ್ಯಸಾಗು ಇಲ್ಲಿ ನಡೆಯಲಿದೆ  ಎಂದು ಶಾಸ್ತಾರ ಫ್ರೆಂಡ್ಸ್ ಅಧ್ಯಕ್ಷಶಿವಪ್ರಸಾದ್ ದುಗ್ಗಲ ಹೇಳಿದರು.


ಈ ವೇಳೆ  ದೇವಸ್ಥಾನದ ಕೋಶಾಧಿಕಾರಿ  ಸೀತರಾಮ ಗೌಡ ಕಾನಮನೆ, ಶ್ರೀ ಕ್ಷೇತ್ರ ಧ. ಗ್ರಾ.ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ, ದೈವಸ್ಥಾನದ ಪರಿಚಾರಕರಾದ ಕುಶಾಲಪ್ಪ ಗೌಡ ಮರ್ವೊಡಿ, ಕುಶಾಲಪ್ಪ ಗೌಡ ರಕ್ಷಾ, ಪಮಣ ಗೌಡ ಬೊಣ್ಯಸಾಗು, ಸುಂದರ ಗೌಡ ಬಾಯ್ತ್ರೋಡಿ, ಶಾಸ್ತಾರ ಫ್ರೆಂಡ್ಸ್  ಪದಾಧಿಕಾರಿಗಳು ಉಪಸ್ಥಿತರಿದ್ದರು.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top