ಬಾಳೆ ಹಣ್ಣು ಖರೀದಿ ನೆಪದಲ್ಲಿ ಬಂದ ವಂಚಕರು: ಟೇಬಲ್ ನಲ್ಲಿದ್ದ ಲಕ್ಷ ರೂ ಕದ್ದೊಯ್ದರು

Kadaba Times News

 

ದ್ವಿಚಕ್ರ ವಾಹನದಲ್ಲಿ ಬಂದ ವಂಚಕರು(kadaba times)

ಕಡಬ ಟೈಮ್, ಕೊಕ್ಕಡ:  ಬಾಳೆಕಾಯಿ ಮತ್ತು ಅಡಿಕೆ ವ್ಯಾಪಾರಿಯೊಬ್ಬರ ಅಂಗಡಿಯಿಂದ ಗ್ರಾಹಕರ ಸೋಗಿನಲ್ಲಿ ಬಂದ ವಂಚಕರು ಲಕ್ಷ ರೂ ಲಪಟಾಯಿಸಿದ ಘಟನೆ ನ. 15ರಂದು ನಡೆದಿದೆ.


ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಓಣಿತ್ತಾರು ಟ್ರೇಡರ್ಸ್ ಬಾಳೆಕಾಯಿ ಮತ್ತು ಅಡಿಕೆ ಅಂಗಡಿಯಿಂದ ರೂ. 1.80ಲಕ್ಷ ಹೆಚ್ಚು ಹಣ ಕಳ್ಳತನವಾಗಿದೆ.


ಮಧ್ಯಾಹ್ನದ ವೇಳೆ   ಅಂಗಡಿಗೆ ಬಾಳೆಹಣ್ಣು ಖರೀದಿ ನೆಪದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ವಂಚಕರು ಮಾಲಕ  ಇಸುಬು ಅವರು ಒಳಗಿನಿಂದ ಬಾಳೆಗೊನೆ ತರಲು ತೆರಳಿದ ಸಂದರ್ಭದಲ್ಲಿ ಟೇಬಲ್ ನಲ್ಲಿದ್ದ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

 

ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಕ್ಕಡ ಪರಿಸರದಲ್ಲಿ ಹಾಡಹಾಗಲೇ ಕಳ್ಳತನಗಳು ನಡೆಯುತ್ತಲೇ ಇದ್ದು ಇದರಿಂದ ಕೊಕ್ಕಡ ಪರಿಸರದ ಜನರು ಜಾಗೃತೆ ವಹಿಸುವಂತೆ ತಿಳಿಸಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top