ಕಡಬ: ವೃದ್ದ ದಂಪತಿಗಳ ಮನೆ ನೆಲಸಮ ಘಟನೆ: ಹೆದ್ದಾರಿ ಬದಿಯಲ್ಲೇ ಪ್ರತಿಭಟನೆ :ಮಹಿಳೆ ಅಸ್ವಸ್ಥ, ಕಣ್ಣೀರು ಹಾಕುತ್ತಾ ಕುಳಿತಿರುವ ವೃದ್ದ

ಕಡಬ: ವೃದ್ದ ದಂಪತಿಗಳ ಮನೆ ನೆಲಸಮ ಘಟನೆ: ಹೆದ್ದಾರಿ ಬದಿಯಲ್ಲೇ ಪ್ರತಿಭಟನೆ :ಮಹಿಳೆ ಅಸ್ವಸ್ಥ, ಕಣ್ಣೀರು ಹಾಕುತ್ತಾ ಕುಳಿತಿರುವ ವೃದ್ದ

Kadaba Times News

 

ತಡ ರಾತ್ರಿ ಪ್ರತಿಭಟನೆ ಸಮಯದಲ್ಲಿ ವೃದ್ದ ದಂಪತಿಗಳು(KADABA TIMES)

ಕಡಬ ಟೈಮ್, ಕೊಕ್ಕಡ:  ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿ ಆರು ವರ್ಷಗಳಿಂದ ವಾಸವಿದ್ದ ವೃದ್ದ ದಂಪತಿಗಳ ಮನೆಯನ್ನು ಪೊಲೀಸ್ ನೇತೃತ್ವದಲ್ಲಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ  ನೆಲಸಮ ಮಾಡಿದ ಹಿನ್ನೆಲೆಯಲ್ಲಿ ನೀತಿ ಸಂಘಟನೆ ಮತ್ತು  ಕೆ.ಆರ್. ಎಸ್ ಪಕ್ಷ ಜಂಟಿಯಾಗಿ  ಹೆದ್ದಾರಿ ಬಳಿ ಪ್ರತಿಭಟನೆಗೆ ಮುಂದಾಗಿದ್ದಾರೆ.


ಅಹೋ ರಾತ್ರಿ ಪ್ರತಿಭಟನೆಗೆ ಕುಳಿತ್ತಿದ್ದು ಕಡಬ ತಹಶೀಲ್ದಾರ್ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿಭಟನೆಗೆ ಸ್ಥಳೀಯರು ಸಾಥ್ ನೀಡಿದ್ದಾರೆ. ಅಲ್ಲದೆ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕುವ ಹೆಚ್ಚರಿಕೆ ನೀಡಿದ್ದಾರೆ.  ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೃದ್ದ  ದಂಪತಿಯ ಮಗಳು ಅಸ್ವಸ್ಥಗೊಂಡಿದ್ದಾರೆ .ಅಲ್ಲದೆ  ವೃದ್ದ ದಂಪತಿಗಳು ಅಳುತ್ತಾ ಕಣ್ಣೀರು  ಹಾಕುತ್ತಿರುವ  ದೃಶ್ಯ ಕಂಡು ಬಂದಿತ್ತು.



ವೃದ್ದ ದಂಪತಿಗಳು ಮಾತನಾಡಿ ನಾವು ತಹಶೀಲ್ದಾರ್ ಕಾಲಿಗೆ ಬಿದ್ದರೂ ಮಾನವೀಯತೆ ತೋರಿಲ್ಲ ಎಂದು ನೋವು ಹಂಚಿಕೊಂಡಿದ್ದಾರೆ.  ಬೆಳ್ತಂಗಡಿ ತಾಲೂಕು ಸಿಪಿಎಂ ಕಾರ್ಯದರ್ಶಿ ಬಿಎಂ ಭಟ್ ತಡ ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನೆ ಧ್ವಂಸ ಘಟನೆಯನ್ನು ಖಂಡಿಸಿ  ನ್ಯಾಯಕ್ಕಾಗಿ ಹೋರಾಟಮಾಡಲು ಸಿದ್ದ ಎಂದಿದ್ದಾರೆ ಅಲ್ಲದೆ ತಹಶೀಲ್ದಾರ್ ಮತ್ತಿತರ ವಿರುದ್ದ  ಮುತ್ತುಸ್ವಾಮಿ ಯವರು ಉಪ್ಪಿನಂಗಡಿ ಠಾಣೆಗೆ ದೂರು ನೀಡಲಾಗಿದೆ ಎಂದಿದ್ದಾರೆ.


ಘಟನೆ ಹಿನ್ನೆಲೆ:  ಕಡಬ ತಾಲೂಕಿನ ಕೌಕ್ರಾಡಿಯಲ್ಲಿ ವಾಸವಾಗಿರುವ ರಾಧಮ್ಮ ಮತ್ತು ಮುತ್ತು ಸ್ವಾಮಿ ದಂಪತಿ ಮನೆಯನ್ನು ಬುಧವಾರ ಕೋರ್ಟ್ ಆದೇಶದಂತೆ ಕಡಬ ತಹಶೀಲ್ದಾರ್ ನೇತೃತ್ವದಲ್ಲಿ ತೆರವುಗೊಳಿಸಲಾಗಿತ್ತು.


ದಂಪತಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಹಟ್ಟಿಯವರು. ಕೂಲಿ ಕೆಲಸಕ್ಕಾಗಿ ಕರಾವಳಿಗೆ ಆಗಮಿಸಿ ಕಡಬ ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮದ ಆಗಮಿಸಿ ವಾಸಗಿದ್ದಾರೆ.ಕೌಕ್ರಾಡಿ ಗ್ರಾಮದ ಕಾವಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದ ಸರ್ವೇ ನಂಬರ್ 123/1ರಲ್ಲಿ ಕಳೆದ 6 ವರ್ಷಗಳಿಂದ ವಾಸಿಸುತ್ತಿದ್ದಾರೆ.  ದಂಪತಿಗೆ ಯಾವುದೆ ಪಿತ್ರಾರ್ಜಿತ ಆಸ್ತಿ ಇಲ್ಲ. ಹೀಗಾಗಿ ಸರ್ಕಾರಿ ಜಾಗ 123/1ರಲ್ಲಿ ಕಾಪಿನಬಾಗಿಲು ಎಂಬಲ್ಲಿ ಸಣ್ಣ ಮನೆಕಟ್ಟಿಕೊಂಡಿದ್ದರು. ದಂಪತಿ ನಿತ್ಯ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top