


ಸುಳ್ಯ ಶಾಸಕಿಯವರಿಗೆ ಮನವಿ ಸಲ್ಲಿಸಿದ ಸಂದರ್ಭ(kadaba times)
ಕಡಬ: ಕೆಲಸ ಮಾಡುತ್ತಿದ್ದ ವೇಳೆ ಕಾಂಕ್ರೀಟ್ ಮಿಕ್ಸ್ ಮಾಡುವ ಯಂತ್ರದೊಳಗೆ ಕೈ ಸಿಲುಕಿ ಮೂಳೆ ಮುರಿತಕ್ಕೆ ಒಳಾಗದ ವ್ಯಕ್ತಿಗೆ ಸ್ವ ಉದ್ಯೋಗ ಮಾಡಲು ನೆರವು ನೀಡುವಂತೆ ಗ್ರಾಮೀಣ ವಿಶೇಷ ಚೇತನರ ಪುನರ್ವಸತಿ ಕಾರ್ಯಕರ್ತರೊಬ್ಬರು ಸುಳ್ಯ ಶಾಸಕಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಕಡಬ
ತಾಲೂಕು ಹಳೆನೇರೆಂಕಿ ಗ್ರಾಮದ ರವಿಚಂದ್ರ
ಎಂಬವರು ಕಾರ್ಮಿಕನಾಗಿ ದುಡಿಯುತ್ತಿದ್ದ ವೇಳೆ ಅವಘಡ
ಸಂಭವಿಸಿ ಕೈ ಕಳೆದುಕೊಂಡಿದ್ದರು. ಕುಟುಂಬಕ್ಕೆ ಆಧಾರಸ್ತಂಭ
ವಾಗಿದ್ದ ಇವರು ತೀವ್ರ ಸಂಕಷ್ಟಕ್ಕೆ
ಒಳಗಾಗಿದ್ದಾರೆ.
ಈ
ಹಿನ್ನೆಲೆಯಲ್ಲಿ ತಾಲೂಕು ಆಡಳಿತ
ಸೌಧದಲ್ಲಿರುವ ಶಾಸಕರ ಕಚೇರಿಗೆ ಆಲಂಕಾರು ಗ್ರಾಮ ಪಂಚಾಯತ್ ನ ಗ್ರಾಮೀಣ ವಿಶೇಷ
ಚೇತನರ ಪುನರ್ವಸತಿ ಕಾರ್ಯಕರ್ತರಾದ ಮೋನಪ್ಪರವರು ಸಲ್ಲಿಸಿದ್ದಾರೆ. ಶಾಸಕಿಯವರು ಮಾನವೀಯ ನೆಲೆಯಲ್ಲಿ
ಸ್ಪಂದಿಸುವ ಭರವಸೆ ನೀಡಿದ್ದಾರೆ.