


![]() |
ಪಲ್ಟಿಯಾಗಿ ಬಿದ್ದಿರುವ ಕಾರು |
ಕಡಬ:
ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರು ಬಳಿಯ ತಿರುವೊಂದರಲ್ಲಿ ಕಾರೊಂದು ಪಲ್ಟಿಯಾದ
ಘಟನೆ ಭಾನುವಾರ ನಡೆದಿದೆ.
ಆಲಂಕಾರಿನ
ನೆಕ್ಕರೆ ಬಳಿ ಈ ಅಪಘಾತ ನಡೆದಿದ್ದು ವೇಗದ ಚಾಲನೆಯೇ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಉಡುಪಿ
ಮೂಲದವರ ಕಾರು ಆಗಿದ್ದು ರಭಸದಿಂದ ಬಂದು ತಿರುವಿನಲ್ಲಿ ಬ್ರೇಕ್ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿದೆ
ಎಂದು ತಿಳಿದುಬಂದಿದೆ.
ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.