ಸುಬ್ರಹ್ಮಣ್ಯದ ಐನೆಕಿದು ಗ್ರಾಮದಲ್ಲಿ ಅಡಿಕೆ ತೋಟಕ್ಕೆ ನುಗ್ಗಿ ದಾಂಧಲೆ ನಡೆದ ಕಾಡಾನೆಗಳು

ಸುಬ್ರಹ್ಮಣ್ಯದ ಐನೆಕಿದು ಗ್ರಾಮದಲ್ಲಿ ಅಡಿಕೆ ತೋಟಕ್ಕೆ ನುಗ್ಗಿ ದಾಂಧಲೆ ನಡೆದ ಕಾಡಾನೆಗಳು

Kadaba Times News
ಆನೆಗಳು ತೋಟಕ್ಕೆ ನುಗ್ಗಿ ಹಾನಿ ಮಾಡಿರುವ ದೃಶ್ಯ
( Kadaba times)


 
ಕಡಬ ಟೈಮ್ಸ್, ಕುಕ್ಕೆ ಸುಬ್ರಹ್ಮಣ್ಯ:  ಕಡಬ ತಾಲೂಕಿನ  ಐನೆಕಿದು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕಾಡಾನೆಗಳು ಕೃಷಿ ತೋಟಕ್ಕೆ ನುಗ್ಗಿ ಹಾನಿ ಮಾಡಿವೆ.

ಸುಬ್ರಹ್ಮಣ್ಯ ಗ್ರಾ.ಪಂ‌ ವ್ಯಾಪ್ತಿಯ  ಕೆದಿಲದಲ್ಲಿ ಬೆಳೆದಿರುವ ಬಾಳೆ, ಅಡಿಕೆ ಹಾಗೂ ನೀರಿನ ಪೈಪ್‌ ಗಳಿಗೆ ಹಾನಿ ಮಾಡಿವೆ.
ಕೃಷಿಕರಾದ ಯಶಸ್‌, ಷಣ್ಮುಖ, ನೀಲಪ್ಪ ಗೌಡ ಅವರ ತೋಟಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸಿರುವುದಾಗಿ ತಿಳಿದು ಬಂದಿದೆ.


ಇನ್ನು ಸುಳ್ಯ ತಾಲೂಕಿನ ಉಬರಡ್ಕದಲ್ಲಿ ಕೃಷಿ ತೋಟಕ್ಕೆ ಕಾಡಾನೆ ನುಗ್ಗಿ ಹಾನಿ ಮಾಡಿರುವ ಘಟನೆಯೂ  ಶುಕ್ರವಾರ ರಾತ್ರಿ ನಡೆದಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top