VIDEO NEWS |ಪುತ್ತೂರು ಶಾಸಕರು ಅನುದಾನ ತರ್ತಾರೆ, ನಮ್ಮ MLA ಗೆ ತಾಕತ್ ಇಲ್ವಾ?

Kadaba Times News

 

ಸಭೆಯಲ್ಲಿ ಚರ್ಚೆ ನಡೆಯುತ್ತಿರುವುದು

ಕಡಬ ಟೈಮ್ಸ್:  ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ (ನ.5ರಂದು ) ನಡೆದ ಸಾಮಾನ್ಯ ಸಭೆಯಲ್ಲಿ ಅನುಧಾನ ತರಿಸುವ ಕುರಿತು ಗಂಭೀರ ಚರ್ಚೆ ನಡೆದಿದೆ.


ಈ ನಡೆದ ಚರ್ಚೆಯಲ್ಲಿ ತಾಕತ್ತು  ಕುರಿತು ಮಾತು ಪ್ರಸ್ತಾಪವಾಗಿ ಮಾತಿಗೆ ಆಡಳಿತ ಪರ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದ ಪ್ರಸಂಗವೂ ನಡೆದಿದೆ.

 

ಸಭೆಯಲ್ಲಿ ನಾಮ ನಿರ್ದೇಶಕ ಸದಸ್ಯ ಸಿದ್ದೀಕ್ ಕೊಕ್ಕೊ ರವರು  ಪುತ್ತೂರಿನ ಶಾಸಕರು ಒಳ್ಳೆಯ ಅನುಧಾನ ತರಿಸುತ್ತಾರೆ,  ನಮ್ಮ ಶಾಸಕರಿಂದ ಏಕೆ ಆಗುತ್ತಿಲ್ಲ,  ಅವರಿಗೆ ತಾಕತ್ ಇಲ್ಲವಾ ಎಂದು ಕೇಳಿದರು. ಇದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ ಸದಸ್ಯ ವಿನಯ್ ಕುಮಾರ್ ಕಂದಡ್ಕರವರು ಮಾತು ಸರಿ ಯಲ್ಲ, ನಮ್ಮ ಶಾಸಕರ ತಾಕತ್ ಬಗ್ಗೆ ಕೇಳಲು ನೀವು ಯಾರು? ಕೂಡಲೇ ಮಾತನ್ನು ಹಿಂಪಡೆಯ ಬೇಕೆಂದು ಪಟ್ಟು ಹಿಡಿದರು.


ಇದಕ್ಕೆ ಪೂರಕವಾಗಿ ಬಿ ಜೆ ಪಿ ಎಲ್ಲಾ ಸದಸ್ಯರುಗಳು ಮತ್ತು ಅಧ್ಯಕ್ಷರು ನಾಮ ನಿರ್ದೇಶಕ ಸದಸ್ಯರ ಮಾತಿಗೆ ಖಂಡನೆ ವ್ಯಕ್ತ ಪಡಿಸಿದರು. ಬಳಿಕ ಸದಸ್ಯರಾದ ಉಮ್ಮರ್ ಕೆ ಎಸ್, ವೆಂಕಪ್ಪ ಗೌಡ,ಮಧ್ಯಪ್ರವೇಶಿಸಿ ಸಮಾಧಾನ ಪಡಿಸಿದರು.



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top