




ಕಡಬ: ಇಲ್ಲಿನ ಮುಖ್ಯ ಪೇಟೆಯಲ್ಲಿ ದ್ವಿಚಕ್ರವಾಹನಗಳ ನಡುವೆ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ .
ಕಳಾರ ಸಮೀಪದ ಕೋಡಿ ವಾಸು ಎಂಬವರು ಗಾಯಗೊಂಡು ಆಸ್ಪತ್ರೆ ದಾಖಲಾದವರು.
ಅಂಚೆ ಕಚೇರಿ ಬಳಿಯ ಆಟೋ ನಿಲ್ದಾಣದ ಮುಂಭಾಗ ಈ ಅಪಘಾತ ನಡೆದಿದ್ದು ಕಡಬದಿಂದ ಕಳಾರದತ್ತ ಹೋಗುತ್ತಿದ್ದ ಸ್ಕೂಟಿ ಸವಾರ ಮತ್ತು ಕಡಬದತ್ತ ಬರುತ್ತಿದ್ದ ಬೈಕ್ ನಡುವೆ ಅಪಘಾತವಾಗಿದೆ.
ಬೈಕ್ ಸವಾರ ನಿವೃತ್ತ ಯೋಧ ಎಂಬ ಮಾಹಿತಿ ಲಭಿಸಿದ್ದು ಅವರಿಗೂ ಸಣ್ಣ ಗಾಯವಾಗಿದೆ. ಸ್ಕೂಟಿ ಸವಾರನಿಗೆ ಹೆಚ್ಚಿನ ಗಾಯವಾಗಿದ್ದು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆ ಗೆ ಪುತ್ತೂರಿಗೆ ಕರೆದೊಯ್ಯಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಲಾಭ್ಯವಾಗಿದೆ.
ವಾಸು ಕೋಡಿ ಕಳಾರ