ಶಾಸಕ ಮುನಿರತ್ನ ಗೆ ನೋಟಿಸ್: ಶಿಸ್ತು ಕ್ರಮಕ್ಕೆ ಮುಂದಾಗುತ್ತಾ ಬಿಜೆಪಿ?

Kadaba Times News
ಕಡಬ ಟೈಮ್ಸ್, ರಾಜಕೀಯ: ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಕೇಸ್‌ ಆರೋಪದಲ್ಲಿ ಶಾಸಕ ಮುನಿರತ್ನ ಅವರ ವಿರುದ್ದ ಎಫ್.ಐ. ಆರ್ ದಾಖಲಾಗಿದೆ.
  
ಈ  ಪ್ರಕರಣದ ಬೆನ್ನಲ್ಲೇ  ರಾಜ್ಯ ಬಿಜೆಪಿ ಶಿಸ್ತು ಸಮಿತಿಯಿಂದ ಮುನಿರತ್ನ ಅವರಿಗೆ  ನೋಟಿಸ್ ನೀಡಿರುವುದಾಗಿ ತಿಳಿದು ಬಂದಿದ್ದು, ತಾವು ಆಡಿದ ಮಾತುಗಳ ಸಂಬಂಧ ಐದು ದಿನಗಳ ಒಳಗೆ ಸ್ಪಷ್ಟೀಕರಣ ಕೊಡುವಂತೆ ಸೂಚನೆ ನೀಡಿರುವ ಪತ್ರ ವೈರಲ್ ಆಗಿದೆ.

ಅವಹೇಳನಕಾರಿಯಾಗಿ ಮಾತಾಡಿರುವ ಮಾತು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಈ ಕುರಿತಂತೆ ತಮ್ಮ ಮೇಲೆ ಎಫ್ಐರ್ ಕೂಡ ದಾಖಲಾಗಿದೆ. ಈ ತರಹದ ಘಟನೆ ಪಕ್ಷದ ಶಿಸ್ತು ಸಮಿತಿಗೆ ಧಕ್ಕೆಯುಂಟು ಮಾಡಿದೆ. ಹೀಗಾಗಿ ಐದು ದಿನಗಳ ಒಳಗೆ ಇದರ‌ ಬಗ್ಗೆ ಸ್ಪಷ್ಟನೆ ಕೊಡುಬೇಕು ಎಂದು ನೊಟೀಸ್ ನಲ್ಲಿ ಉಲ್ಲೇಖಿಸಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top