


ಕಡಬ: ಇಲ್ಲಿನ ಕಳಾರ ಮಸೀದಿ ಬಳಿ ರಾಜ್ಯ ರಸ್ತೆಯಲ್ಲಿಯೇ ಕಾರಲ್ಲಿ ಬಂದ ವ್ಯಕ್ತಿಯೊಬ್ಬನಿಗೆ ಹೊಡೆದು ಬಳಿಕ ಮಾತುಕತೆ ಮೂಲಕ ಇತ್ಯರ್ಥವಾದ ಘಟನೆ ಸೆ.19 ರ ರಾತ್ರಿ ನಡೆದಿರುವುದಾಗಿ ತಿಳಿದು ಬಂದಿದೆ.
ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು ವಾಗ್ವಾದ ,ನಿಂದನೆ ನಡೆದು ಹೊಡೆಯುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ. ಕಾರಲ್ಲಿ ಇದ್ದ ವ್ಯಕ್ತಿಗೆ ಥಳಿಸಿದ್ದನ್ನು ವಾಹನ ಸವಾರರೂ ಗಮನಿಸಿದ್ದು ಕೆಲ ಹೊತ್ತು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.
ಈ ಸುದ್ದಿಯನ್ನೂ ಓದಿರಿ: ನೆಲ್ಯಾಡಿ: ವಾಟ್ಸಪ್ ಸ್ಟೇಟಸ್ ಹಾಕಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ ರಬ್ಬರ್ ಟ್ಯಾಪರ್
ಇನ್ನು ಈ ಘಟನೆಯ ಸುದ್ದಿ ಹರಡುತ್ತಿದ್ದಂತೆ ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿದ್ದಾರೆ. ಈ ನಡುವೆ ವಾಗ್ವಾದ ಮಾಡಿಕೊಂಡವರು ಒಂದೇ ಸಮುದಾಯಕ್ಕೆ ಸೇರಿದ್ದು ಹೀಗಾಗಿ ಮಾತುಕತೆ ನಡೆದಿರುವುದಾಗಿ ತಿಳಿದು ಬಂದಿದೆ.