ಕಡಬದ ಕಳಾರ ಮಸೀದಿ ಬಳಿ ರಾತ್ರಿ ಮಾತಿನ ಚಕಮಕಿ:ಗುಂಪು ಸೇರಿದ ಜನರು, ಪೊಲೀಸರಿಂದ ಪರಿಶೀಲನೆ

Kadaba Times News

 ಕಡಬ: ಇಲ್ಲಿನ ಕಳಾರ ಮಸೀದಿ ಬಳಿ ರಾಜ್ಯ ರಸ್ತೆಯಲ್ಲಿಯೇ ಕಾರಲ್ಲಿ ಬಂದ ವ್ಯಕ್ತಿಯೊಬ್ಬನಿಗೆ ಹೊಡೆದು ಬಳಿಕ ಮಾತುಕತೆ ಮೂಲಕ ಇತ್ಯರ್ಥವಾದ ಘಟನೆ ಸೆ.19 ರಾತ್ರಿ ನಡೆದಿರುವುದಾಗಿ ತಿಳಿದು ಬಂದಿದೆ.




ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು  ವಾಗ್ವಾದ ,ನಿಂದನೆ ನಡೆದು ಹೊಡೆಯುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ  ಕಾರಲ್ಲಿ ಇದ್ದ ವ್ಯಕ್ತಿಗೆ ಥಳಿಸಿದ್ದನ್ನು  ವಾಹನ ಸವಾರರೂ ಗಮನಿಸಿದ್ದು ಕೆಲ ಹೊತ್ತು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.


ಈ ಸುದ್ದಿಯನ್ನೂ ಓದಿರಿ:  ನೆಲ್ಯಾಡಿ: ವಾಟ್ಸಪ್ ಸ್ಟೇಟಸ್ ಹಾಕಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ  ರಬ್ಬರ್ ಟ್ಯಾಪರ್


ಇನ್ನು ಘಟನೆಯ ಸುದ್ದಿ ಹರಡುತ್ತಿದ್ದಂತೆ  ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿದ್ದಾರೆ. ನಡುವೆ ವಾಗ್ವಾದ ಮಾಡಿಕೊಂಡವರು ಒಂದೇ ಸಮುದಾಯಕ್ಕೆ ಸೇರಿದ್ದು ಹೀಗಾಗಿ ಮಾತುಕತೆ ನಡೆದಿರುವುದಾಗಿ ತಿಳಿದು ಬಂದಿದೆ.   

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top