




ಕಡಬ ತಾಲೂಕಿನ ಕೊಣಾಜೆಯಲ್ಲಿ ಕಾನೂನು ಬಾಹಿರವಾಗಿ ಭಾನುವಾರ ಆಯೋಜನೆಗೊಂಡಿದ್ದ ಕೋಳಿ ಅಂಕಕ್ಕೆ ಪೊಲೀಸರು ಏಕಾಏಕಿ ದಾಳಿ ಮಾಡಿದ್ದು ಹಲವು ಮಂದಿ ತಮ್ಮ ಕೋಳಿ ಜೊತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಮೇಲಾಧಿಕಾರಿಗಳ ಸೂಚನೆ ಮೇರೆಗೆ ಉಪ್ಪಿನಂಗಡಿ ಠಾಣಾ ಪೊಲೀಸರು ದಾಳಿ ಮಾಡಿರುವುದಾಗಿ ತಿಳಿದು ಬಂದಿದ್ದು ಸ್ಥಳದಲ್ಲಿದ್ದವರು ವಿಧಿಇಲ್ಲದೆ ದಿಕ್ಕುಪಾಲಾಗಿ ಓಡಿರುವುದಾಗಿ ಮಾಹಿತಿ ಲಭಿಸಿದೆ.
ಕೋಳಿ ಅಂಕಕ್ಕೆ ಅನುಮತಿ ಕೋರಿ ಅಯೋಜಕರ ತಂಡ ಅಧಿಕಾರಿಗಳ ಬಳಿ ತೆರಳಿದ್ದರೂ ಕೋಳಿ ಅಂಕ ನಿಷೇಧ ಇರುವ ಹಿನ್ನಲೆ ಆಸ್ಪದ ನೀಡಿರಲಿಲ್ಲ. ಈ ನಡುವೆ ಪ್ರಭಾವ ಬಳಸಿ ಕೋಳಿ ಅಂಕಕ್ಕೆ ಭರದ ಸಿದ್ದತೆ ನಡೆಸಿದಲ್ಲದೆ, ಮುಂಜಾನೆಯಿಂದಲೇ ಕೋಳಿ ಅಂಕ ಶುರುವಾಗಿತ್ತು ಎಂದು ತಿಳಿದು ಬಂದಿದೆ.
.ಈ ಬಗ್ಗೆ ಮೇಲಾಧಿಕಾರಿಗಳಿಗೂ ಮಾಹಿತಿ ರವಾನೆಯಾಗಿತ್ತು. ಹೀಗಾಗಿ ಮಾಧ್ಯಮ ದಲ್ಲಿ ಸುದ್ದಿಗಳು ಪ್ರಕಟವಾಗಿದ್ದವು.ಅಕ್ರಮ ಕೋಳಿ ಅಂಕ ಆಯೋಜನೆಗೊಂಡ ಸ್ಥಳದಲ್ಲಿ ಅಂಗಡಿ ಹಾಕಲಾಗಿದ್ದು ಪೊಲೀಸರ ಏಕಾಏಕಿ ದಾಳಿಯಿಂದ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವುದಾಗಿ ಮಾಹಿತಿ ಲಭಿಸಿದೆ.
ಪೊಲೀಸ್ ದಾಳಿಯಿಂದ ಬೇಸೆತ್ತ ಆಯೋಜಕರು
ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದವರ ಮಾಹಿತಿ ಕಲೆ ಹಾಕಲು ಮುಂದಾಗಿದಲ್ಲದೆ, ಅಂತವರ ವಿರುದ್ದ ದೈವಕ್ಕೆ ಹರಕೆ ಹೇಳುವುದಾಗಿ ಮಾಹಿತಿ ರವಾನಿಸಿ ಆಕ್ರೋಶ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.