ಹಣ ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಉಲಾಯಿ –ಪಿದಾಯಿ:ಪೊಲೀಸ್ ರೈಡ್, 24 ಮಂದಿ ವಿರುದ್ಧ ಪ್ರಕರಣ ದಾಖಲು

ಹಣ ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಉಲಾಯಿ –ಪಿದಾಯಿ:ಪೊಲೀಸ್ ರೈಡ್, 24 ಮಂದಿ ವಿರುದ್ಧ ಪ್ರಕರಣ ದಾಖಲು

Kadaba Times News

 ಕಡಬ ಟೈಮ್,  ಶೆಡ್ನೊಳಗೆ ಸುಮಾರು 15-20 ಜನರು ಅಕ್ರಮವಾಗಿ ಹಣ  ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಉಲಾಯಿಪಿದಾಯಿ (ಅಂದರ್‌-ಬಹಾರ್‌ ) ಎಂಬ ಅದೃಷ್ಟದ ಆಟವನ್ನು ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪುಂಜಾಲಕಟ್ಟೆ ಪೊಲೀಸರು ದಾಳಿ ಮಾಡಿದ್ದಾರೆ.



ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಮಡಂತ್ಯಾರು ಪೇಟೆಯ ಬಳಿಯಿರುವ ಕಟ್ಟಡದ ಹಿಂಭಾಗದಲ್ಲಿಈ ಅದೃಷ್ಟದಾಟ ನಡೆಯುತ್ತಿತ್ತು.   ಈ ಕೃತ್ಯದಲ್ಲಿ ತೊಡಗಿದ್ದ ಪೆರ್ನೆ,ಬಜತ್ತೂರು ನಿವಾಸಿಗಳ ಸಹಿತ 23 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.


ಠಾಣಾ ಪಿಎಸ್ ನಂದಕುಮಾರ್ಎಂ.ಎಂ ನೇತೃತ್ವದ ಪೊಲೀಸರು  ದಾಳಿ ನಡೆಸಿ ಜುಗಾರಿ ಆಟಕ್ಕೆ ಉಪಯೋಗಿಸಿದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.  ಸ್ವಾಧೀನಪಡಿಸಿಕೊಂಡಿರುವ ನಗದು ಸೇರಿ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 36729/- ಆಗಬಹುದು.


ಆರೋಪಿಗಳನ್ನು ಮೊನಪ್ಪ ಪೂಜಾರಿ, ಅಬ್ದುಲ್ಖಾದರ್‌, ಮೊಹಮ್ಮದ್ಹೈದರ್‌, ಜೋಸ್ತೋಮಸ್‌, ಅಬೂಬಕ್ಕರ್‌, ಲೋಕನಾಥ ಬಂಗೇರ ತುಕರಾಮ್‌, ಅಬ್ದುಲ್ರಹಿಮಾನ್‌, ಯಶೋಧರ, ರಮೇಶ್ಆಚಾರ್ಯ, ಜಿ..ದಾವೂದ್‌, ರಿಯಾಜ್ಮೊಹಮ್ಮದ್‌, ಅಬೂಬಕ್ಕರ್ಅಬ್ದುಲ್ರವೂಫ್‌, ಮುಸ್ತಾಫ, ಎಂ.ಅಶ್ರಫ್‌, ರಮೇಶ್‌.ಕೆ, ಅಬ್ದುಲ್ರಝಾಕ್‌, ಕಮಲಾಕ್ಷ ದಾಸ್‌, ವಿಜಯ ಕುಮಾರ್, ಮಜೀದ್ಯಾನೆ ಅಬ್ದುಲ್ಮಜೀದ್, ಶ್ರೀಧರ ಪೂಜಾರಿ, ಮುಸ್ತಾಫ,  ಎಂದು ಗುರುತಿಸಲಾಗಿದೆ

 

ಬಗ್ಗೆ ನ್ಯಾಯಾಲಯದಿಂದ ಅನುಮತಿ ಪಡೆದು ಪುಂಜಾಲಕಟ್ಟೆ ಠಾಣೆಯಲ್ಲಿ .ಕ್ರ 67/2024 ಕಲಂ: 79, 80 ಕರ್ನಾಟಕ ಪೊಲೀಸ್ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top