




ಕಡಬ ಟೈಮ್ಸ್ : ಬೆಳ್ಳಾರೆ ಠಾಣೆಯ ಎಸ್.ಐ ಸಂತೋಷ್ ಬಿ.ಪಿ ಅವರನ್ನು ಸುಳ್ಯ ಠಾಣೆಗೆ ವರ್ಗಾಹಿಸಲಾಗಿದ್ದು ನೂತನ ಎಸ್.ಐ ಆಗಮಿಸಿದ್ದಾರೆ.
ಸುಳ್ಯ
ಠಾಣಾ ಎಸ್ಐ
ಈರಯ್ಯ ದೂಂತೂರು ಅವರು ಬೆಳ್ಳಾರೆ
ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಅಕ್ರಮ ದಂಧೆಕೋರರಿಗೆ ಸಿಂಹಸ್ವಪ್ನವಾಗಿ ಖಡಕ್ ಸಬ್ ಇನ್ಸ್ಪೆಕ್ಟರ್ ಎಂದೇ ಖ್ಯಾತಿ ಗಳಿಸಿ ಈ ಹಿಂದೆ ಬೆಳ್ಳಾರೆ ಠಾಣಾ ಎಸ್ಐ ಆಗಿದ್ದ ಈರಯ್ಯ ದೂಂತುರು ಅವರು ಬಳಿಕ ಉಪ್ಪಿನಂಗಡಿ, ಸುಳ್ಯ ಠಾಣೆಗಳಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಇದೀಗ ಮತ್ತೆ ಬೆಳ್ಳಾರೆಗೆ ವರ್ಗಾವಣೆಯಾಗಿದ್ದಾರೆ.ಆಡಳಿತಾತ್ಮಕ ದೃಷ್ಟಿಯಿಂದ ಈ ವರ್ಗಾವಣೆ ಮಾಡಿರುವುದಾಗಿ ತಿಳಿದು ಬಂದಿದೆ.