




ಕಡಬ: ಬಾಂಗ್ಲಾ ದೇಶದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಜನಜಾಗೃತಿಗೋಸ್ಕರ ಮಾನವ ಸರಪಳಿ ಸೋಮವಾರ ಸಂಜೆ ಕಡಬದಲ್ಲಿ ನಡೆದಿದೆ.
ಕಡಬ
ಜಂಕ್ಷನ್ನಲ್ಲಿ ಸೇರಿದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಾಣ ಮಾಡಿಕೊಂಡು ಬಿತ್ತಿ ಪತ್ರಗಳನ್ನು ಪ್ರದರ್ಶಿಸುತ್ತಾ ಮೆರವಣಿಗೆಯಲ್ಲಿ
ಸಾಗಿ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಸೇರಿ ಮಾನವ ಸರಪಳಿ ನಿಮಾಣ ಮಾಡಿ ಅಕ್ರೋಶ ವ್ಯಕ್ತಪಡಿಸಿದರು.
ಈ
ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಭಾರತದ
ಮೇಲೆ ನಿಯಂತ್ರಣ ಸಾಧಿಸಬೇಕು ಎನ್ನುವ ಭಾರತ ವಿರೋಧಿ ದೇಶಗಳ ಕುತಂತ್ರದ ಭಾಗವಾಗಿ ಬಾಂಗ್ಲಾದದಲ್ಲಿ ಹಿಂಸಾಚಾರ ನಡೆಸಲಾಗಿದೆ. ಅಲ್ಲಿ ಅಲ್ಪ ಸಂಖ್ಯಾತ ಹಿಂದೂಗಳ ಮಾರಣ ಹೋಮವಾಗುತ್ತಿದೆ. ಈ ಬಗ್ಗೆ ನಾವು
ಎಚ್ಚೆತ್ತುಕೊಳ್ಳದೆ ಹೋದರೆ ಅಪಾಯ ತಪ್ಪಿದ್ದಲ್ಲ ಎಂದರು.
ಈ
ಸಂದರ್ಭದಲ್ಲಿ ಮುಖಂಡರಾದ
ವಾಸುದೇವ ಭಟ್ ಕಡ್ಯ, ರವಿರಾಜ್
ಶೆಟ್ಟಿ ಕಡಬ, ಕೃಷ್ಣ
ಶೆಟ್ಟಿ ಕಡಬ, ಅಶ್ವಿತ್ ಕಂಡಿಗ, ರಾಧಾಕೃಷ್ಣ ಕೋಲ್ಪೆ, ಪ್ರಮೋದ್ ರೈ ನಂದುಗುರಿ, ವೆಂಕಟ್ರಮಣ
ರಾವ್ ಮಂಕುಡೆ ಸೇರಿದಂತೆ ಪ್ರಮುಖರಿದ್ದರು.