ಕಡಬ ತಾಲೂಕು ಮೊಗೇರ ಸಂಘ ಅಸ್ತಿತ್ವಕ್ಕೆ: ವಿವಿಧ ಪದಾಧಿಕಾರಿಗಳ ಆಯ್ಕೆ

ಕಡಬ ತಾಲೂಕು ಮೊಗೇರ ಸಂಘ ಅಸ್ತಿತ್ವಕ್ಕೆ: ವಿವಿಧ ಪದಾಧಿಕಾರಿಗಳ ಆಯ್ಕೆ

Kadaba Times News

 ಕಡಬ: ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಮೊಗೇರ ಸಂಘ ವಿವಿಧ ತಾಲೂಕಿನಲ್ಲಿ ಕಾರ್ಯಾಚರಿಸುತ್ತಿದ್ದು ಕಡಬ ತಾಲೂಕಿಗೂ ವಿಸ್ತರಣೆಗೊಂಡಿದೆ. ಆ.25ರಂದು ಕಡಬದ ಶ್ರೀ ದುರ್ಗಾಂಬಿಕ ದೇವಸ್ಥಾನದ ಸಭಾಂಗಣದಲ್ಲಿ  ನಡೆದ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ.

ದುರ್ಗಾಂಬಿಕ ದೇವಸ್ಥಾನದ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಯ ದೃಶ್ಯ


ನೂತನ ಅಧ್ಯಕ್ಷರಾಗಿ ಶಶಿಧರ್ ಬೊಟ್ಟಡ್ಕ  ,ಪ್ರಧಾನ ಕಾರ್ಯದರ್ಶಿಯಾಗಿ   ಆನಂದ ಕುಮಾರ್ ಕಜೆ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಸಂತ ಕುಬಲಾಡಿ, ಮಹಾಬಲ ಪಡುಬೆಟ್ಟು, ಕೋಶಾಧಿಕಾರಿ  ಗೋಪಾಲ್ ಬೀಡು,  ಜೊತೆ ಕಾರ್ಯದರ್ಶಿ ದಿನೇಶ್ ಗಾಣಂತಿ, ಸಾಂಸ್ಕೃತಿಕ  ಕಾರ್ಯದರ್ಶಿ  ಹರ್ಷ ಕೋಡಿ, ಕ್ರೀಡಾ ಕಾರ್ಯದರ್ಶಿ  ಮಹೇಶ್ ಪಟ್ಲಡ್ಕ, ಮಾಧ್ಯಮ ಕಾರ್ಯದರ್ಶಿ ಸತೀಶ್ ಕೈಕಂಬ ಅವರನ್ನು ಆಯ್ಕೆ ಮಾಡಲಾಯಿತು.



ಉಳಿದಂತೆ  ಸದಸ್ಯರುಗಳಾಗಿ ಆನಂದ ಹೊಸ್ಮಠ, ಚಂದ್ರಹಾಸ ಬಲ್ಯ , ಉಷಾ ಕೋಡಿ, ಅಣ್ಣಿ ಪರಪ್ಪು, ಶೀನಪ್ಪ ದೇರೋಡಿ, ಆನಂದ ದೇವರಗದ್ದೆ ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಮಾಯಿಲಪ್ಪ ಮಾಸ್ಟರ್ ,ರವಿಚಂದ್ರ ಪಡುಬೆಟ್ಟು, ವಿಜಯ್ ವಿಕ್ರಂ ಗಾಂಧಿಪೇಟೆ, ತನಿಯಪ್ಪ  ಸಂಪಡ್ಕ, ಕೊಗ್ಗು ದೇವರ ಗದ್ದೆ ಆಯ್ಕೆಯಾಗಿದ್ದಾರೆ



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top