ಸುಬ್ರಹ್ಮಣ್ಯ ಗ್ರಾ.ಪಂ: ಮಾಧ್ಯಮದ ಜನಹಿತ ವರದಿಗೆ ಸ್ಪಂದನೆ : ಒಂದೇ ದಿನದಲ್ಲಿ ಮುಕ್ತಿಧಾಮದಲ್ಲಿ ಉರಿಯಿತು ವಿದ್ಯುತ್ ದೀಪ!

Kadaba Times News

 ಕುಕ್ಕೆ ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಗ್ರಾ.ಪಂ ವ್ಯಾಪ್ತಿಯ  ಇಂಜಾಡಿ ಬಳಿ ಇರುವ (ಶವಗಾರ) ಮುಕ್ತಿಧಾಮದಲ್ಲಿ ವಿದ್ಯುತ್ ಬೆಳಕಿಲ್ಲದೆ  ಶವ ಸಂಸ್ಕಾರ ನಡೆಸಿದ ಘಟನೆ ಬಗ್ಗೆ ಮಾಧ್ಯಮದಲ್ಲಿ ಸಚಿತ್ರ ಸಮೇತ ವರದಿ ಪ್ರಕಟಿಸಿತ್ತು.


ವರದಿಯ ಒಂದೇ ದಿನದಲ್ಲಿ ಮುಕ್ತಿಧಾಮಕ್ಕೆ ವಿದ್ಯುತ್ ವ್ಯವಸ್ಥೆ ಕಲ್ಪಿಸಿದೆ. ಮೂಲಕ ಜನಹಿತ ವರದಿಗೆ ಶೀಘ್ರ ಸ್ಪಂಧನೆ ದೊರಕಿದೆ.



ಮುಕ್ತಿಧಾಮಕ್ಕೆ ವಿದ್ಯುತ್ ಸಂಪರ್ಕ ಇಲ್ಲದೆ ವಾಹನದ ಬೆಳಕಿನಲ್ಲಿ ಶವಸಂಸ್ಕಾರ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂದೆಯೂ ರೀತಿಯಾಗಿದ್ದು ಇದರ ಬಗ್ಗೆ ರಿಕ್ಷಾ ಚಾಲಕ ಮಾಲಕರು ಹಾಗೂ ಊರಿನ ನಾಗರಿಕರು ಬಹಳ ಆಕ್ರೋಶ ವ್ಯಕ್ತ ಪಡಿಸಿದ್ದರು.


ಇದನ್ನು ಪತ್ರಕರ್ತರು ಹಾಗೂ ಟಿವಿ ಮಾಧ್ಯಮದವರು ಪ್ರಕಟಿಸಿದ್ದರು. ಇದೀಗ ವಿದ್ಯುತ್ ಅವ್ಯವಸ್ಥೆ ಬಗ್ಗೆ ಮಾಡಿದ ವರದಿಗೆ ಪಂಚಾಯತ್ ತಕ್ಣಣ ಸ್ಪಂಧಿಸಿದ್ದು ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕವನ್ನು ಸರಿಪಡಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top