




ಸಕಲೇಶಪುರ : ಭಾರಿ ಮಳೆಗೆ ಸಕಲೇಶಪುರ ಮಾರ್ನಲ್ಲಿ ಮಧ್ಯೆ ದೊಡ್ದತೊಪ್ಪಲು ಎಂಬಲ್ಲಿ ಜುಲೈ31ರಂದು ಮತ್ತೆ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದೆ.
ಮಣ್ಣು ರಸ್ತೆಗೆ ಬಂದಿದ್ದು ಡಾಮರ್ ಹೇರಿಕೊಂಡು
ಹೋಗುತ್ತಿದ್ದ ಟ್ಯಾಂಕರ್, ಕಂಟೇನರ್ ವಾಹನ ಸಿಲುಕಿಕೊಂಡಿದೆ
ಎಂಬ ಮಾಹಿತಿ ಲಭಿಸಿದೆ.
ಜೇಸಿಬಿ ವಾಹನ ಮೂಲಕ ಮಣ್ಣು ತೆರವು ಕಾರ್ಯ ನಿರಂತರ ನಡೆಯುತ್ತಿದ್ದು, ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ರಾಜ್ಯ ಸದಸ್ಯರಾದ ಹರೀಶ್. ಎಮ್ ಅವರು ಕಡಬ ಟಿಮ್ಸ್ ಗೆ ಮಾಹಿತಿ ನೀಡಿದ್ದಾರೆ. ಮಂಗಳವಾರ ರಾತ್ರಿ ಹಾಸನ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.