




ಒಂದೇ ಠಾಣೆಯಲ್ಲಿ ಐದು ವರ್ಷ ಸೇವೆ ಸಲ್ಲಿಸಿದ ಪೊಲೀಸರ ವರ್ಗಾವಣೆ ಆದೇಶ
ಕಡಬ: ಐದು ವರ್ಷಗಳಿಂದ ಒಂದೇ ಠಾಣೆಯಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗಳು, ಹೆಡ್ ಕಾನ್ಸ್ಟೇಬಲ್ ಗಳು,ಎ ಎಸ್ ಐ ಗಳನ್ನು ವರ್ಗಾವಣೆ ಮಾಡುವಂತೆ ಕರ್ನಾಟಕ ಸರ್ಕಾರ ಆದೇಶ ನೀಡಿದೆ.
ಈ
ಹಿನ್ನಲೆಯಲ್ಲಿ ಕಡಬಪೊಲೀಸ್ ಠಾಣೆಯಿಂದ ಒಟ್ಟು ಆರು ಪೊಲೀಸರ ಕೌನ್ಸಿಲಿಂಗ್ ಇಂದು
ಮಂಗಳೂರು ಎಸ್ಪಿ ಕಚೇರಿಯಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಕಡಬ
ಠಾಣೆಯ ಎ.ಎಸ್.ಐ ಸುರೇಶ್, ಹೆಡ್ ಕಾನ್ಸ್ಟೇಬಲ್ ಭವಿತ್, ಕಾನ್ಸ್ಟೇಬಲ್ ಗಳಾದ ಚಂದನ್,ಶ್ರೀ ಶೈಲಾ,
ಭಾಗ್ಯಮ್ಮ, ಚಂದ್ರಿಕಾ ಅವರು ವರ್ಗಾವಣೆಗೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 198 ಮಂದಿ ಪೊಲೀಸರು ಈ ಪ್ರಕ್ರಿಯೆ ಮೂಲಕ
ವರ್ಗಾವಣೆಗೊಳ್ಳಲಿದ್ದಾರೆ
ಎನ್ನಲಾಗಿದೆ.
ಸುಳ್ಯ ಠಾಣೆಯಿಂದ 1ಎ ಎಸ್ ಐ, 6 ಹೆಡ್ ಕಾನ್ಸ್ಟೇಬಲ್, 10 ಪೊಲೀಸ್ ಸಿಬ್ಬಂದಿಗಳು, ಬೆಳ್ಳಾರೆ ಠಾಣೆ ಯಿಂದ 5 ಹೆಡ್ ಕಾಂಸ್ಟೇಬಲ್, 8 ಪಿಸಿ ಗಳು ಸುಬ್ರಹ್ಮಣ್ಯ ಠಾಣೆಯಿಂದ 1 ಎ ಎಸ್ ಐ, ಮೂವರು ಹೆಡ್ಕಾನ್ಸ್ಟೇಬಲ್, ಆರು ಪೊಲೀಸ್ ಸಿಬ್ಬಂದಿಗಳು ತೆರಳಿರುವುದಾಗಿ ತಿಳಿದುಬಂದಿದೆ.
ಎಸ್
ಪಿ ಕಚೇರಿಯಲ್ಲಿ ಎಲ್ಇಡಿ ಪರದೆ ಮೂಲಕ ಹುದ್ದೆ ಖಾಲಿ ಇರುವ ಠಾಣೆಗಳ ವಿವರವನ್ನು ನೀಡಿ ಸ್ಥಳಗಳ ಬಗ್ಗೆ ಹಿರಿಯ ಅಧಿಕಾರಿಗಳು ವರ್ಗಾವಣೆಗೊಳ್ಳಲಿರುವ ಪೊಲೀಸರಿಗೆ ಮಾಹಿತಿ ನೀಡುವ ಕಾರ್ಯ ನಡೆಸುತ್ತಾರೆ ಎಂದು ತಿಳಿದು ಬಂದಿದೆ.