




ಕಡಬ :ಭಾರೀ ಮಳೆಗೆ ಇಲ್ಲಿನ ಇಚ್ಲಂಪಾಡಿ ಪರಿಸರದಲ್ಲಿ ಮಳೆ ಅಬ್ಬರಕ್ಕೆ ನದಿಯಲ್ಲಿ ನೀರು ಏರಿಕೆಯಾಗಿದೆ.ತೊರೆ ಹಳ್ಳಗಳು ತುಂಬಿ ಹರಿಯುತ್ತಿರುವ ಕಾರಣದಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಕೃಷಿ ಭೂಮಿಯಲ್ಲೂ ನೀರು ತುಂಬಿಕೊಂಡಿದೆ.ಮಡಿಪು -ಬರೆಮೇಲು ಸಂಪರ್ಕ ರಸ್ತೆಯಲ್ಲಿ ಸುಮಾರು ಎರಡು ಅಡಿಗಳಷ್ಟು ನೀರು ನಿಂತಿದ್ದು ರಸ್ತೆ ಸಂಪರ್ಕ ಕಡಿತಗೊಂಡು ಜನ ಪರದಾಡುವಂತಾಗಿದೆ.
ಇಚ್ಲಂಪಾಡಿ ಉಳ್ಳಾಕ್ಲು ದೈವಸ್ತಾನ, ಹೊಸಮನೆ ಮೋನಪ್ಪ ಶೆಟ್ಟಿ, ಮಾನಡ್ಕ ಸಂತೋಷ್ ಪಿಳ್ಳೆಯವರ ತೋಟ ಜಲಾವ್ರತಗೊಂಡಿರುವುದಾಗಿ ತಿಳಿದು ಬಂದಿದೆ.