ರಕ್ಷಿತಾರಣ್ಯದಲ್ಲಿ ಬೈಕ್, ಬಟ್ಟೆ ಬರೆ ಬಿಟ್ಟು ಅರೆನಗ್ನ ಸ್ಥಿತಿಯಲ್ಲೇ ಎಸ್ಕೇಪ್: ಸ್ಥಳಕ್ಕೆ ಬಂದ ಪೊಲೀಸರಿಗೆ ಸಿಕ್ಕಿದು ಈ ವಸ್ತುಗಳು

ರಕ್ಷಿತಾರಣ್ಯದಲ್ಲಿ ಬೈಕ್, ಬಟ್ಟೆ ಬರೆ ಬಿಟ್ಟು ಅರೆನಗ್ನ ಸ್ಥಿತಿಯಲ್ಲೇ ಎಸ್ಕೇಪ್: ಸ್ಥಳಕ್ಕೆ ಬಂದ ಪೊಲೀಸರಿಗೆ ಸಿಕ್ಕಿದು ಈ ವಸ್ತುಗಳು

Kadaba Times News

 ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ಸಾಲೆತ್ತೂರು ಭಾಗದ ರಕ್ಷಿತಾರಣ್ಯ ಅನೈತಿಕ ಚಟುವಟಿಕೆ, ಅಕ್ರಮ ದಂಧೆಗಳ ಅಡ್ಡೆಯಾಗುತ್ತಿರುವುದು ಬೆಳಕಿಗೆ ಬಂದಿದೆ.

ವಿಟ್ಲ ಸಮೀಪದ  ಕೊಳ್ನಾಡು ಗ್ರಾಮದ ಸಾಲೆತ್ತೂರು-ಕುಡ್ತಮುಗೇರು ಮೂಲಕ ಕನ್ಯಾನ ತಲುಪುವ ಒಳರಸ್ತೆಯ ಮೂಲಕ ಕಾಂಕ್ರೀಟ್ ರಸ್ತೆ ಕಳೆಂಜಿಮಲೆ ರಕ್ಷಿತಾರಣ್ಯ ಮೂಲಕ ಹಾದು ಹೋಗುತ್ತದೆ.ಪ್ರಸ್ತುತ ದಿನಗಳಲ್ಲಿ ದಿನವಿಡೀ ರಕ್ಷಿತಾರಣ್ಯ ಪ್ರದೇಶದಲ್ಲಿ ರಾಜಾರೋಷವಾಗಿ ಮದ್ಯ, ಡ್ರಗ್ಸ್ ಸೇವಿಸುವ ಪುಂಡರು ಅಲೆದಾಡುತ್ತಿರುವ ಆರೋಪಗಳು ಇಂದು ನಿನ್ನೆದಯಲ್ಲ.



ರಕ್ಷಿತಾರಣ್ಯ ಪ್ರದೇಶದ ಕುಳಾಲು, ಕುದ್ರಿಯ, ಮಂಕುಡೆ, ಕೋಜಿಗುರಿ ಮತ್ತು ಕುಂಟ್ರಕಳ ಪರಿಸರದ ನೂರಾರು ವಿದ್ಯಾರ್ಥಿಗಳು ಕನ್ಯಾನ, ವಿಟ್ಲ, ಮುಡಿಪು ಭಾಗಕ್ಕೆ ವಿದ್ಯಾರ್ಜನೆಗೆ ರಸ್ತೆಯನ್ನುಅನುಸುರಿಸುತ್ತಿದ್ದಾರೆ. ಹಲವಾರು ವಾಹನಗಳೂ ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ. ಇದ್ಯಾವುದಾರ ಪರಿವೆಯೇ ಇಲ್ಲದೇ ನಶೆಯಲ್ಲಿ ತೇಲಾಡುವ ಪುಂಡರು ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಪರಿಸರದ ಜನರ ತೀವ್ರ ಮುಜುಗರಕ್ಕೆ ಕಾರಣವಾಗಿದೆ.


ಅಪ್ರಾಪ್ತ ಬಾಲಕಿಯನ್ನು ರಕ್ಷಿತಾರಣ್ಯಕ್ಕೆ ಬೈಕ್ ಸವಾರನೊಬ್ಬ ಕರೆತಂದಿದ್ದಾನೆಂಬ ಸುದ್ದಿ ತಿಳಿದು ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿ ಹುಡುಕಾಡಿದ್ದಾರೆ.  ಜನ ಸೇರುತ್ತಿದ್ದ ನಡುವೆಯೇ ಬೈಕ್, ಬಟ್ಟೆ ಬರೆಗಳನ್ನು ಅಲ್ಲೇ ಬಿಟ್ಟು ಅರೆನಗ್ನರಾಗಿದ್ದ ಯುವಕ-ಯುವತಿ ಪರಾರಿಯಾಗಿದ್ದಾರೆ ಎಂದು ಗುಮಾನಿ ಬಂದಿದೆ.


ಸಾರ್ವಜನಿಕರ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಿತಾರಣ್ಯದಲ್ಲಿ ಅನಾಥ ಸ್ಥಿತಿಯಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ನಶೆಯೇರಿಸುವ ಮಾತ್ರೆಗಳು, ಕಾಂಡೋಮುಗಳು ಮತ್ತು ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ.


ಪೊಲೀಸರು ಯುವತಿ ಮತ್ತು ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಇನ್ನಾದರೂ ರಕ್ಷಿತಾರಣ್ಯ ಪರಿಸರ ಪುಂಡರಿಂದ ಮುಕ್ತವಾಗಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಭಾಗದಲ್ಲಿ ದಿನಕ್ಕೆ ಎರಡುಮೂರು ಬಾರಿಯಾದರೂಗಸ್ತು ಪೋಲಿಸ್ ವ್ಯವಸ್ಥೆ ಮಾಡಿದರೆ ಇಂತಹ ಸಮಸ್ಯೆಗಳಿಗೆ / ಪ್ರಕರಣಗಳಿಗೆ ಕಡಿವಾಣ ಹಾಕಬಹುದು ಎನ್ನುತ್ತಾರೆ  ಅಲ್ಲಿನ ಸಾರ್ವಜನಿಕ  ಅಭಿಮತ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top