




ಕಡಬ : ಭಾರೀ ಗಾಳಿ ಮಳೆಗೆ ತಡ ರಾತ್ರಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ರಸ್ತೆಯ ಹೊಸಮಠ ಜಂಕ್ಷನ್ ಬಳಿ ತಡ ರಾತ್ರಿ ರಸ್ತೆಗೆ ಮರಬಿದ್ದಿದ್ದು ಮೆಸ್ಕಾಂ ಜೊತೆ ಕಡಬ ಪೊಲೀಸರು ಕೈಜೋಡಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿರುವ ಘಟನೆ ಜುಲೈ 26 ರಂದು ವರದಿಯಾಗಿದೆ.
ರಾತ್ರಿ ಸುಮಾರು ಒಂದು ಗಂಟೆಯ ಸುಮಾರಿಗೆ ಮರಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದು ತಂತಿಗಳು ರಸ್ತೆಯಲ್ಲೇ ಹರಡಿದ್ದವು. ಕಡಬ ಪೊಲೀಸರಿಗೆ ಸಾರ್ವಜನಿಕರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಗಾಳಿ ಮಳೆಯ ನಡುವೆಯೂ ತಡ ರಾತ್ರಿ ಎ ಎಸ್.ಐ ಸುರೇಶ್ ನೇತೃತ್ವದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳೂ ಬಳಿಕ ಆಗಮಿಸಿದ್ದು ಮರ ಮತ್ತು ವಿದ್ಯುತ್ ತಂತಿ ತೆರವುಗೊಳಿಸಲು ಮುಂದಾಗಿದ್ದಾರೆ .ಇನ್ನು ಸ್ಥಳೀಯರು ಅಧಿಕಾರಿಗಳಿಗೆ ಸಹಕಾರ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸ್ ಕಾಸ್ಟೇಬಲ್ ಮಲ್ಲಿಕಾರ್ಜುನ , ಹೋಮ್ ಗಾರ್ಡ್ ಸಂತೋಷ್ ಹಾಗೂ ಸ್ಥಳೀಯಲಿದ್ದರು.