




ಕಡಬ ಟೈಮ್ಸ್(KADABA TIMES):ನೆಲ್ಯಾಡಿ: ಡೆತ್ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ತಾಲೂಕಿನ ನೆಲ್ಯಾಡಿಯ ಹೊಸವೊಕ್ಲು ಎಂಬಲ್ಲಿ ಆ.9ರಂದು ಬೆಳಿಗ್ಗೆ ನಡೆದಿದೆ.
ಹೊಸವೊಕ್ಲು ನಿವಾಸಿ ವಾಸುದೇವ ಗೌಡ ಎಂಬವರ ಪುತ್ರ ಅಭಿಷೇಕ್(36ವ.)ಆತ್ಮಹತ್ಯೆ ಮಾಡಿಕೊಂಡ ಯುವಕ.
ಕಳೆದ ಒಂದೂವರೇ ವರ್ಷದಿಂದ ಮೈಸೂರಿನ ಬಾರ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ಯುವಕ ಆ.7ರಂದು ಬೆಳಿಗ್ಗೆ ಮನೆಗೆ ಬಂದಿದ್ದರು. ಹಳೆ ಮನೆಯಲ್ಲಿ ತಂದೆಯೊಂದಿಗೆ ವಾಸ್ತವ್ಯವಿದ್ದು ಆ.9ರಂದು ಬೆಳಿಗ್ಗೆ ತಂದೆ ಮನೆಯಿಂದ ಹೊರಗೆ ಹೋಗಿದ್ದ ವೇಳೆ ಮನೆಯೊಳಗಿದ್ದ ಫ್ಯಾನ್ಗೆ ನೇಣುಬಿಗಿದುಕೊಂಡಿದ್ದರು ಎನ್ನಲಾಗಿದೆ.

ತಕ್ಷಣ ಮನೆಯವರುವಾಹನದಲ್ಲಿ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆತಂದರಾದರೂ ಆ ವೇಳೆಗಾಗಲೇ ಆತ ಕೊನೆಯುಸಿರೆಳೆದಿದ್ದರು ಎಂದು ವರದಿಯಾಗಿದೆ.
ಈತನ ಪ್ಯಾಂಟ್ನ ಜೇಬಿನಲ್ಲಿ ಡೆತ್ನೋಟ್ವೊಂದು ಪತ್ತೆಯಾಗಿದ್ದು ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.ಈತನ ತಂದೆ ವಾಸುದೇವ ಗೌಡರವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.