




ಕಡಬ ಟೈಮ್ಸ್(KADABA TIMES):ಕಡಬ ಪಟ್ಟಣ ಸಮೀಪದ ಹಳೆ ಸ್ಟೇಷನ್ ಜಂಕ್ಷನ್ ಬಳಿಯಿಂದ ಕಲ್ಲುಗುಡ್ಡೆ ಸಂಪರ್ಕಿಸುವ ರಸ್ತೆಯಲ್ಲಿ ಡಾಮರು ಕಿತ್ತು ಹೊಂಡ ಗುಂಡಿ ನಿರ್ಮಾಣಗೊಂಡಿದ್ದರೂ ದುರಸ್ತಿ ಕಾರ್ಯ ಮಾತ್ರ ನಡೆದಿಲ್ಲ. ಈ ಬಗ್ಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೆ ಸ್ಟೇಷನ್ – ಕಲ್ಲುಗುಡ್ಡೆ ಸಂಪರ್ಕ ರಸ್ತೆಯ ಹಳೆ ಸ್ಟೇಷನ್ ಮರದ ಮಿಲ್ ಬಳಿ ರಸ್ತೆ ತೀರ ದುಸ್ತರ ಗೊಂಡಿದೆ. ಡಾಮರು ಕಿತ್ತು ಹೋಗಿ ಹೊಂಡ ಗುಂಡಿ ನಿರ್ಮಾಣಗೊಂಡು ಹಲವು ತಿಂಗಳು ಕಳೆದರೂ ದುರಸ್ತಿ ನೆಡೆದಿಲ್ಲ ಎಂಬ ದೂರು ವ್ಯಕ್ತವಾಗಿದೆ.

ಮಳೆಗಾಲ ಈಗಾಗಲೇ ಆರಂಭವಾಗಲಿದ್ದು, ಈ ವೇಳೆ ಗುಂಡಿಯಲ್ಲಿ ನೀರು ನಿಂತು ಗುಂಡಿ ಕಾಣಿಸದೇ ವಾಹನ ಸವಾರರು ಎಡವಿ ಬಿದ್ದು ಅಪಘಾತ ಸಂಭವಿಸುವ ಆತಂಕ ವ್ಯಕ್ತವಾಗಿದೆ. ಅಲ್ಲದೇ ಅಲ್ಲೇ ಹಂಪ್ಸ್ ಕೂಡ ಇದ್ದೂ ಅದೂ ಗಮನಕ್ಕೆ ಬರದೆ ಇರುವುದಿಂದ ಸವಾರರು ಸಂಕಷ್ಟ ಅನುಭವಿಸಬೇಕಿದೆ. ಶೀಘ್ರ ದುರಸ್ತಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.