SKSSF ಮಾಡಾವು ಯೂನಿಟ್‌ನಿಂದ ಸಾರ್ವಜನಿಕ ಕುಡಿಯುವ ನೀರು ಉಧ್ಘಾಟನೆ

SKSSF ಮಾಡಾವು ಯೂನಿಟ್‌ನಿಂದ ಸಾರ್ವಜನಿಕ ಕುಡಿಯುವ ನೀರು ಉಧ್ಘಾಟನೆ

Kadaba Times News

ಕೆಯ್ಯೂರು: ಕೆಯ್ಯೂರು ಗ್ರಾಮದ ಮೂಲಕ ಹಾದು ಹೋಗುವ ಹೆದ್ದಾರಿಯ ಬದಿಯಲ್ಲಿ ಎರಡು ಕಡೆ ಸಾರ್ವಜನಿಕರಿಗೆ ಶುದ್ಧ ವಾದ ಕುಡಿಯುವ ನೀರಿನ ವ್ಯವಸ್ಥೆಯನ್ನು SKSSF ಮಾಡಾವು ಯೂನಿಟ್ ವತಿಯಿಂದ ಮಾಡಲಾಯಿತು. ಜೂನ್ ೨೨ರಂದು ವಿಶ್ವ ಜಲ ದಿನವನ್ನು ಆಚರಿಸುವ ಸಲುವಾಗಿ ಗ್ರಾಮದ ಬದ್ರಿಯಾ ಮಸೀದಿ ಬಳಿಯಲ್ಲಿ ಮತ್ತು ಕೈಕಂಬದಲ್ಲಿ ಈ ವ್ಯವಸ್ಥೆಯನ್ನು ಮಾಡಲಾಯಿತು. ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ ಬದ್ರಿಯಾ ಮಸೀದಿ ಮಾಡಾವು ಬಳಿ ಸ್ಥಾಪಿಸಲಾದ ಕುಡಿಯುವ ನೀರಿನ ಯೋಜನೆಯನ್ನು ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟಿಸಿದರು. ಕೈಕಂಬದಲ್ಲಿ ಈ ಯೋಜನೆಯನ್ನು ಸ್ಥಳೀಯ ವೈದ್ಯರಾದ ಶಿವಪ್ರಸಾದ್ ಶೆಟ್ಟಿ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್ ಮುಸ್ಲಿಯಾರ್, ಕಾರ್ಯದರ್ಶಿ ಮಹಮೂದ್ ಹಾಜಿ, ಸ್ಥಳೀಯ ಖತೀಬ್ ಜನಾಬ್ ಶಿಹಾಬ್ ಫೈಜಿ, ಕೆಯ್ಯೂರು ಗ್ರಾ.ಪಂ. ಪಂಚಾಯತ್ ಸದಸ್ಯ ಜಯಂತ ಪೂಜಾರಿ ಕೆಂಗುಡೇಲು, ಮೀನಾಕ್ಷಿ ರೈ ಮಾಡಾವು, ತಾರನಾಥ ಕಂಪ ಪಂಚಾಯತ್  PDO  ಸುಬ್ರಮಣ್ಯ ಕೆ.ಎಂ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಆನಂದ ಪಿ, ಪೊರ್ಲುದ ಕೆಯ್ಯೂರು ವಿಷನ್ ಕಾರ್ಯದ್ಯಕ್ಷ ಶಿವರಾಮ ರೈ ಕಜೆ, ಪ್ರಧಾನ ಕಾರ್ಯದರ್ಶಿ ಆನಂದ ರೈ ದೇವಿನಗರ, ಬೊಳಿಕಲ ಶಾಲಾ ಶಿಕ್ಷಕ ಪದ್ಮಯ್ಯ, ಕೆಯ್ಯೂರು ಗ್ರಾ.ಪಂ.ಮಾಜಿ ಅದ್ಯಕ್ಷ ಬಾಬು.ಬಿ, ಹನೀಫ್ ಹಾಜಿ, ಇಸ್ಮಾಯಿಲ್ ಮಾವಿನಡಿ, ಹಮೀದ್ ದಾರಿಮಿ, ಹಾರಿಸ್ ಪಾತುಂಜ, ಶಾಫಿ ಕಣಿಯಾರ್ ಸಿರಾಜ್ ಂಏ, ನಿಜಾಮ್ ಹೊನೆಸ್ಟ್ ಉಪಸ್ಥಿತರಿದ್ದರು. SKSSF ಯೂನಿಟ್ ಅಧ್ಯಕ್ಷ ಇಬ್ರಾಹಿಂ ಮಾಸ್ಟರ್ ಸ್ವಾಗತಿಸಿ ವಂದಿಸಿದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top