




ಕಡಬ ಟೈಮ್ಸ್, ಮನೋರಂಜನೆ: ಭರವಸೆಯ ಹವ್ಯಾಸಿ ಯುವ ಗಾಯಕ ವಸಂತ ಗುರಿಯಡ್ಕ ಹಾಡಿರುವ “ಪಣೋಲಿ ಬೈಲ್ ಸತ್ಯದಪ್ಪೆ ಕಲ್ಲುರ್ಟಿ” ತುಳು ಭಕ್ತಿಗೀತೆ ಆಲ್ಬಂ ಬಿಡುಗಡೆಗೊಂಡಿದೆ.
ರಕ್ಷಿತ್ ಮಂಚಿಕಟ್ಟೆ ಸಾಹಿತ್ಯ ಬರೆದಿದ್ದು ಮಂಥನ್ ಕಡಬ ಚಿತ್ರೀಕರಣ ಮಾಡಿದ್ದಾರೆ. ಬಾಲಕೃಷ್ಣ ಪಟ್ಟತ್ ಮೊಗೇರ್ ವೀಡಿಯೋ ಸಂಕಲನ ಮಾಡಿದ್ದು, ಮಂಗಳೂರಿನ ಸಪ್ತಕ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಡು ಧ್ವನಿಮುದ್ರಣಗೊಂಡಿದೆ.

ಈ ಹಾಡಿನ ಕಡಬದ ಪಿಜಕಾಳ ಶಾಲಾ ಮಕ್ಕಳು ನೃತ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಯುವ ಗಾಯಕನಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.