




ಕಡಬ ಟೈಮ್ಸ್, ಗುತ್ತಿಗಾರು: ಪೊಲೀಸ್ ಇಲಾಖೆ ವತಿಯಿಂದ ಗುತ್ತಿಗಾರಿನಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ಗೆ ಬಣ್ಣ ಬಳಿದು ದುರಸ್ತಿ ಮಾಡಿ ಸ್ಟಿಕ್ಕರ್ ಅಳವಡಿಸಿದ ಕಾರಣಕ್ಕೆ ಸುಬ್ರಹ್ಮಣ್ಯ ಎಸ್ಐ ಓಮನರವರು ಮೆಚ್ಚುಗೆ ವ್ಯಕ್ತಪಡಿಸಿ ಚಾಲಕರಿಗೆ ಸಿಹಿತಿಂಡಿ ವಿತರಿಸಿದ್ದಾರೆ.
ಬಿ.ಎಂ.ಎಸ್. ಅಟೋ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ವಿಜೇತರಾಗಿರುವುದಕ್ಕೆ ಠಾಣಾಧಿಕಾರಿಯನ್ನು ರಿಕ್ಷಾ ಚಾಲಕರು ಗೌರವಿಸಿದರು. ಅಲ್ಲದೆ ಜಾತ್ರೆ ಮತ್ತು ಇತರ ಕಾರ್ಯಕ್ರಮಗಳ ಉಪಯೋಗಕ್ಕೆ ಹೆಚ್ಚುವರಿ ಬ್ಯಾರಿಕೇಡ್ನ್ನು ಇಲಾಖೆ ವತಿಯಿಂದ ನೀಡಬೇಕು ಎಂದು ರಿಕ್ಷಾ ಚಾಲಕರ ಸಂಘದ ವತಿಯಿಂದ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಉದಯ ಕುಮಾರ್ ಹಾಲೆಮಜಲು , ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು