




ಕಡಬ ಟೈಮ್ಸ್, ರಾಜಕೀಯ ಸುದ್ದಿ: ಎಲ್ಲ ರಾಜಕೀಯ ಪಕ್ಷಗಳು ಆರೆಸ್ಸೆಸ್ನಿಂದ ಪ್ರಭಾವಿತವಾಗಿದೆ. ಆದರೆ ಎಂದೂ ರಾಜಕೀಯ ಮಾಡಿಲ್ಲ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕೂಡ ಆರೆಸ್ಸೆಸ್ ಜತೆ ಇದ್ದರು ಎಂದು ಎಂಎಲ್ ಸಿ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಮಾ.18ರಂದು ನಡೆದ ವಿಧಾನ ಪರಿಷತ್ತ್ ಕಲಾಪದಲ್ಲಿ ಮಾತನಾಡಿದ ಅವರು, ಉದ್ದೇಶ ನಿರ್ಧಿಷ್ಟವಾಗಿದ್ದರೆ ಅವಕಾಶಗಳು ಸಿಕ್ಕೇ ಸಿಗುತ್ತವೆ. ಇದಕ್ಕೆ ನಾನು, ಸಾಬಣ್ಣ ತಳವಾರ, ಶಾಂತಾರಾಮ ಮೊದ ಲಾದವರು ನಿದರ್ಶನ.

ಆರೆಸ್ಸೆಸ್ ವ್ಯಕ್ತಿತ್ವ ನಿರ್ಮಾಣದ ಕೆಲಸ ಮಾಡುತ್ತಿ ದೆಯೇ ಹೊರತು ರಾಜಕೀಯ ಮಾಡುತ್ತಿಲ್ಲ, ಜವಾಹರ್ಲಾಲ್ ನೆಹರೂ ಅವರು ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಆರೆಸ್ಸೆಸ್ಗೆ ಅವಕಾಶ ನೀಡಿದ್ದರು. ಪ್ರಣವ್ ಮುಖರ್ಜಿಯೂ ಸಂಘದ ಬಗ್ಗೆ ಒಲವು ಹೊಂದಿದ್ದರು ಎಂದರು.