ಕಾಣಿಯೂರು: ಪಿಡಿಒ ಮತ್ತು ಕಾರ್ಯದರ್ಶಿ ಸಭೆಗೆ ಗೈರು |ಬೆಳಂದೂರು ಗ್ರಾ.ಪಂ ನ ಪ್ರಥಮ ಸಾಮಾನ್ಯ ಸಭೆ ರದ್ದು

ಕಾಣಿಯೂರು: ಪಿಡಿಒ ಮತ್ತು ಕಾರ್ಯದರ್ಶಿ ಸಭೆಗೆ ಗೈರು |ಬೆಳಂದೂರು ಗ್ರಾ.ಪಂ ನ ಪ್ರಥಮ ಸಾಮಾನ್ಯ ಸಭೆ ರದ್ದು

Kadaba Times News

ಕಡಬ ಟೈಮ್ಸ್, ಕಾಣಿಯೂರು: ಬೆಳಂದೂರು ಗ್ರಾ.ಪಂ ನ  ಸಾಮಾನ್ಯ ಸಭೆಯು ಅಧಿಕಾರಿಗಳ ಗೈರು ಹಿನ್ನಲೆಯಲ್ಲಿ  ರದ್ದುಗೊಂಡಿದೆ.

ಮಾ ೨೪ರಂದು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟರವರ ಅಧ್ಯಕ್ಷತೆಯಲ್ಲಿ ಪ್ರಥಮ ಸಾಮಾನ್ಯ ಸಭೆಯು ನಡೆಸುವುದೆಂದು ದಿನ ನಿಗದಿಯಾಗಿತ್ತು. ಗ್ರಾ.ಪಂ. ಸದಸ್ಯರು ಸಭೆಯಲ್ಲಿ ಭಾಗವಹಿಸಿತ್ತಾದರೂ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮತ್ತು  ಕಾರ್ಯದರ್ಶಿಯವರ ಗೈರಿನ ಹಿನ್ನಲೆಯಲ್ಲಿ ಸಾಮಾನ್ಯ ಸಭೆಯನ್ನು ರದ್ದುಗೊಳಿಸಿ, ಮುಂದೂಡಲಾಗಿದೆ.

ಮಾ.31ಕ್ಕೆ ಸಾಮಾನ್ಯ ಸಭೆ ಮೂಂದೂಡಿಕೆ: ಮಾ ೩೧ರಂದು ಸಾಮಾನ್ಯ ಸಭೆ ನಡೆಯಲಿದೆ ಎಂದು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ತಿಳಿಸಿದ್ದಾರೆ.  ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಸದಸ್ಯರಾದ ವಿಠಲ ಗೌಡ ಅಗಳಿ, ಜಯಂತ ಅಬೀರ, ಮೋಹನ ಅಗಳಿ, ಪ್ರವೀಣ್ ಕೆರೆನಾರು, ರವಿಕುಮಾರ್ ಕೆಡೆಂಜಿ, ಜಯರಾಮ ಬೆಳಂದೂರು, ಉಮೇಶ್ವರಿ ಅಗಳಿ, ಗೀತಾ ಕುವೆತ್ತೋಡಿ, ತಾರಾ ಅನ್ಯಾಡಿ, ಗೌರಿ ಮಾದೋಡಿ, ಹರಿಣಾಕ್ಷಿ ಬನಾರಿ, ಕುಸುಮಾ ಅಂಕಜಾಲು, ಪಾರ್ವತಿ ಮರಕ್ಕಡ ಉಪಸ್ಥಿತರಿದ್ದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top