ಕೊಕ್ಕಡ:ಶಾಲಾ ಮಕ್ಕಳನ್ನು ಮಸೀದಿ ಕಾರ್ಯಕ್ರಮಕ್ಕೆ ಕರೆದೊಯ್ದ ವಿಚಾರ | ಶಿಕ್ಷಣ ಇಲಾಖೆಯಿಂದ ತನಿಖೆಗೆ ಆದೇಶ

ಕೊಕ್ಕಡ:ಶಾಲಾ ಮಕ್ಕಳನ್ನು ಮಸೀದಿ ಕಾರ್ಯಕ್ರಮಕ್ಕೆ ಕರೆದೊಯ್ದ ವಿಚಾರ | ಶಿಕ್ಷಣ ಇಲಾಖೆಯಿಂದ ತನಿಖೆಗೆ ಆದೇಶ

Kadaba Times News

ಕಡಬ ಟೈಮ್, ಕೊಕ್ಕಡ : ನೆಲ್ಯಾಡಿ ಸಮೀಪದ   ಕೊಕ್ಕಡ ಪ್ರೌಢ ಶಾಲೆಯ ವಿದ್ಯಾರ್ಥಿಗಳನ್ನು ಮಸೀದಿ ಉದ್ಘಾಟನ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದ ವಿಚಾರಕ್ಕೆ ಸಂಬಂಧಿಸಿ   ಪ್ರಭಾರ ಮುಖ್ಯ ಶಿಕ್ಷಕ ದಿನೇಶ್ ರವರಿಗೆ ಕಡ್ಡಾಯ ರಜೆ ನೀಡಿ ಇಲಾಖೆ ಆದೇಶ ನೀಡಿದೆ.

ಈ ಘಟನೆಗೆ ಸಂಬಂಧಿಸಿ  ತನಿಖೆ ನಡೆಸಲು ಜಿಲ್ಲಾ ಉಪಯೋಜನಾಧಿಕಾರಿ ಮಂಜುಳಾ ಅವರಿಗೆ ಸೂಚಿಸಿದೆ.  ಕೊಕ್ಕಡದಲ್ಲಿ ನವೀಕರಣಗೊಂಡು  ಮಾರ್ಚ್ 20 ರಂದು ಉದ್ಘಾಟನೆಗೊಂಡ ಮಸೀದಿಗೆ ಅಲ್ಲಿನ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ವಿದ್ಯಾರ್ಥಿಗಳನ್ನು  ಕರಕೊಂಡು ಹೋಗಿದ್ದರು.

ಅಧ್ಯಕ್ಷರ ಮತ್ತು ಶಾಲಾ ಕಮಿಟಿಯ ಹಾಗೂ ಮಕ್ಕಳ ಪಾಲಕರ ಅನುಮತಿ ಪಡೆಯದೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಈ ಸ್ವ ನಿರ್ಧಾರ ಕೈಗೊಂಡ ಬಗ್ಗೆ ಆರೋಪ ವ್ಯಕ್ತವಾಗಿತ್ತು.   ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೂ ಕಾರಣವಾಗಿತ್ತು

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top