




ಕಡಬ ಟೈಮ್ಸ್, ನೆಲ್ಯಾಡಿ: ಇಲ್ಲಿನ ಸಯ್ಯಿದ್ ಮಲ್ಹರ್ ವಲಿಯುಲ್ಲಾಹಿ(ಖ.ಸಿ.)ದರ್ಗಾ ಶರೀಫ್ ಕೋಲ್ಪೆ ಇದರ ಆಶ್ರಯದಲ್ಲಿ ಕೋಲ್ಪೆ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಮಾ.೨೪ರಿಂದ ೨೭ರ ತನಕ ನಡೆಯಲಿರುವ ಕೋಲ್ಪೆ ಮಖಾಂ ಉರೂಸ್ ಮತ್ತು ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮದ ಅಂಗವಾಗಿ ಮಾ.೨೪ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿತು.
ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಮುದರ್ರೀಸ್ ಮಹಮ್ಮದ್ ಶರೀಫ್ ದಾರಿಮಿ ಅಲ್ಹೈತಮಿಯವರು ಧ್ವಜಾರೋಹಣ ನೆರವೇರಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಎಂ.ಆದಂ ಕೋಲ್ಪೆ ಅಧ್ಯಕ್ಷತೆ ವಹಿಸಿದ್ದರು.

ಆಡಳಿತ ಸಮಿತಿ ಉಪಾಧ್ಯಕ್ಷರಾದ ಎ.ಕೆ.ಹಮೀದ್ ಕೋಲ್ಪೆ, ಅಬ್ದುಲ್ಲಾ ಕುಂಞಿ ಕೊಂಕೋಡಿ, ಕಾರ್ಯದರ್ಶಿ ಯು.ಕೆ.ಉಮ್ಮರ್ ಕೋಲ್ಪೆ, ಜೊತೆ ಕಾರ್ಯದರ್ಶಿ ಆರ್.ಕೆ.ಅಬ್ದುಲ್ ಖಾದರ್, ಕೋಶಾಧಿಕಾರಿ ಕೆ.ಅಬ್ದುಲ್ ಶುಕೂರು ಕೆಜಿಎನ್ ಸೇರಿದಂತೆ ಪ್ರಮುಖರು ಹಾಜರಿದ್ದರು ಕೆ.ಎಸ್.ನಾಸೀರ್ ಸಮರಗುಂಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.