




ಕಡಬ ಟೈಮ್ಸ್, ಬಿಳಿನೆಲೆ : ಕಡಬ ತಾಲೂಕಿನ ಬಿಳಿನೆಲೆಯಲ್ಲಿ ಜಾಗದ ವಿಚಾರವೊಂದಕ್ಕೆ ಸಂಬಂಧಿಸಿ ಮಹಿಳೆಯೋರ್ವರಿಗೆ ತನ್ನ ಅಣ್ಣನ ಮಗನಾಗಿರುವ ಸೈನಿಕ ಹಾಗೂ ಅವರ ಸಹೋದರ ಸೇರಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿ ಮಹಿಳೆಯು ಮಾ.೨೩ರಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಬಿಳಿನೆಲೆ ಗ್ರಾಮದ ಸೂಡ್ಲು ನಿವಾಸಿ ಪದ್ಮಯ್ಯ ಗೌಡ ಎಂಬವರ ಪತ್ನಿ ಭವಾನಿಯವರು ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು.

ಆಸ್ಪತ್ರೆಗೆ ದಾಖಲಾಗಿರುವ ಭವಾನಿಯವರು ಮಾಧ್ಯಮಕ್ಕೆ ಹೇಳಿಕೆ ನೀಡಿ, ನನ್ನ ಅಣ್ಣನ ಮಕ್ಕಳಾದ ಪೊಂಬೊಳಿ ನಿವಾಸಿಗಳಾದ ಕಿಶೋರ್ ಕುಮಾರ್ ಮತ್ತು ಚೇತನ್ ಅವರು ತಮ್ಮ ಹಕ್ಕಿನ ಜಾಗವನ್ನು ಅವರ ಹೆಸರಿಗೆ ಬರೆಸಿಕೊಳ್ಳುವ ಸಲುವಾಗಿ ಸುಳ್ಳು ಹೇಳಿ ಬಲವಂತವಾಗಿ ಸಹಿ ಮಾಡಿಕೊಂಡಿದ್ದಾರೆ, ಸಹಿ ಮಾಡಿ ಬರುವ ವೇಳೆ ದಾರಿ ಮಧ್ಯೆ ನನಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿದ್ದಾರೆ. ಈ ಬಗ್ಗೆ ಕಡಬ ಪೋಲಿಸರು ದೂರು ದಾಖಲಿಸಿಕೊಂಡಿದ್ದಾರೆ.